ವೇದಮಂತ್ರಗಳ ಅದ್ಭುತ ರಹಸ್ಯ

Author : ಗಿರಿಮನೆ ಶ್ಯಾಮರಾವ್

Pages 236

₹ 160.00




Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ ಸಕಲೇಶಪುರ - 573134
Phone: 9739525514

Synopsys

ವೇದಗಳು ಎಂಬುದು ಭಾರತೀಯರ ಜೀವ ನಾಡಿಯಲ್ಲಿ ಬೆರೆತು ಹೋಗಿದೆ. ಬಹುಶಃ ಎಲ್ಲಾ ಭಾರತೀಯರು ವೇದಗಳನ್ನು ಓದಿಕೊಳ್ಳದೆ ಇರಬಹುದು. ಆದರೆ ವೇದಗಳ ಬಗೆಗೆ ಒಂದು ಸಣ್ಣ ಅರಿವು, ನಂಬಿಕೆ, ಮತ್ತು ಭಯ ನಿಶ್ಚಿತವಾಗ ಪ್ರತಿಯೊಬ್ಬ ಭಾರತೀಯನಿಗೂ ಇರುತ್ತದೆ. ಇದು ವೇದದಲ್ಲಿ ಉಲ್ಲೇಖವಾಗಿರುವ ಅಂಶ ಎಂದರೆ ಪ್ರಾಯಶಃ ಆ ಮಾತನ್ನು ಧಿಕ್ಕರಿಸುವ, ಕಡೆಗಣಿಸುವ ದುಸ್ಸಾಹಸವನ್ನು ಯಾವ ವ್ಯಕ್ತಿಯೂ ಮಾಡಲಾರ. ಅದನ್ನು ಪ್ರಶ್ನಿಸುವ, ಅದರ ಹಿಂದಿನ ವೈಜ್ಞಾನಿಕತೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಸಹ ಯಾರೂ ಮಾಡುವುದಿಲ್ಲ. ಇದನ್ನೇ ಪ್ರಶ್ನೆಯಾಗಿಟ್ಟುಕೊಂಡು ಗಿರಿಮನೆ ಶ್ಯಾಮರಾವ್ ಅವರು ವೇದ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಭಂದಿಸಿದಂತೆ ಬರೆದ ಮತ್ತೊಂದು ಕೃತಿಯೇ ‘ವೇದ ಮಂತ್ರಗಳ ಅದ್ಭುತ ರಹಸ್ಯ’. ಪ್ರಸ್ತುತ ಕೃತಿಯಲ್ಲಿ ಲೇಖಕರು ವೇದ ಎಂದರೆ ಅದೊಂದು ಜ್ಞಾನ ಭಂಡಾರ, ಅದು ನಮ್ಮನ್ನು ಜ್ಞಾನದೆಡೆಗೆ ಕರೆದೊಯ್ಯುವ ದಿಕ್ಸೂಚಿ. ಆದರೆ ನಮಗೆ ವೇದಗಳ ಬಗ್ಗೆ ತಪ್ಪು ಕಲ್ಪನೆಗಳೇ ಹೆಚ್ಚು. ಯಾವುದು ಅತಿಮಾನಷವೋ, ಅವೈಜ್ಞಾನಿಕವೋ ಅವ್ಯಾವೂ ವೇದದಲ್ಲಿ ಬರುವುದಿಲ್ಲ.ವೇದ ಎಂದರೆ ಅದು ಯಾವಾಗಲು ಜ್ಞಾನ, ವಿಜ್ಞಾನ ಮತ್ತು ವ್ಯಕ್ತಿತ್ವವಿಕಸನ ಎನ್ನುತ್ತಾರೆ. ಈ ರೀತಿ ವೇದಗಳ ಬಗ್ಗೆ ನಿಖರ ಮಾಹಿತ ಕೊಡುತ್ತಾ ಹೋಗುವ ಲೇಖಕರು ಪ್ರಸ್ತುತ ಕೃತಿಯಲ್ಲಿ ನಮ್ಮ ಸಂಪ್ರದಾಯಗಳು ಹೇಗೆ ಬೆಳೆದು ಬಂದವು, ಜ್ಞಾನ ಎಂದರೆ ನಿಜಕ್ಕೂ ಏನೂ, ದೇವರು ಎಂದರೆ ಏನೂ, ನಮ್ಮ ಮಂತ್ರಗಳು ಹೇಗೆ ಬೆಳೆದು ಬಂದವು ಎಂಬುದರ ಕುರಿತು ಚರ್ಚಿಸಿದ್ದಾರೆ. ಜೊತೆಗೆ ನಮ್ಮ ವೇದಗಳು ಎಂದಿಗೂ ಅವೈಜ್ಞಾನಿಕವಾದದ್ದನ್ನು, ಅಮಾನುಷವಾದದ್ದನ್ನು ತಿಳಿಸಿಯೇ ಇಲ್ಲ. ವೇದಗಳಲ್ಲಿ ಉಲ್ಲೇಖವಾಗಿರುವ ಎಲ್ಲಾ ಶಾಸ್ತ್ರ ಸಂಪ್ರದಾಯಗಳು ವೈಜ್ಞಾನಿಕವಾಗಿರುವುದೇ ಮತ್ತು ಮನುಷ್ಯನ ಒಳಿತಿಗೆ ಅಗತ್ಯವಾಗಿರುವಂತಹದ್ದು. ವೇದಗಳು ಎಲ್ಲಾ ಜಾತಿ ಪಂಗಡಗಳನ್ನು ಮೀರಿ “ಹೇ ಮಾನವ” ಎಂದು ಉಲ್ಲೇಖಿಸುತ್ತಾ ವಿಶ್ವ ಮಾನವ ಸಂದೇಶವನ್ನು ಸಾರಿದೆ. ವೇದಗಳು ಎಂದಿಗೂ ಪ್ರಶ್ನಿಸು ಸರಿಯಾದ ಉತ್ತರವನ್ನೇ ಪ್ರಶ್ನಿಸಿ ಯೋಚಿಸಿ ಪಡೆದುಕೋ ಎನ್ನತ್ತದೆ, ಹೀಗಾಗಿ ವೇದಗಳ ಬಗ್ಗೆ ತಪ್ಪು ಪಲ್ಪನೆ ಸಲ್ಲದ್ದು ಎಂದಿದ್ದಾರೆ. ಹೀಗೆ ವೇದಗಳ ಬಗ್ಗೆ ನಿರ್ದಿಷ್ಠವಾದ ಅಭಿಪ್ರಾಯವನ್ನು ಮೂಡಿಸುವಲ್ಲಿ ಗಿರಿಮನೆ ಶ್ಯಾಮರಾವ್ ಪ್ರಸ್ತುತ ಕೃತಿಯಲ್ಲಿ ಶ್ರಮಿಸಿದ್ದಾರೆ ಎಂಬುದು ಗಮನಾರ್ಹ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books