ನಮ್ಮೊಳಗಿದೆ ಗೆಲುವಿನ ಬೆಳಕು

Author : ಸಿಬಂತಿ ಪದ್ಮನಾಭ ಕೆ.ವಿ

Pages 176

₹ 190.00




Year of Publication: 2023
Published by: ಅಂಕುರ್ ಮೀಡಿಯಾ ಪಬ್ಲಿಕೇಷನ್ಸ್
Address: ತುಮಕೂರು
Phone: 9449525854

Synopsys

ವ್ಯಕ್ತಿತ್ವ ವಿಕಸನದ ವಿಚಾರವನ್ನಿಟ್ಟುಕೊಂಡೇ ಬರೆದ ಪುಸ್ತಕ ಸಿಬಂತಿ ಪದ್ಮನಾಭ ಅವರ 'ನಮ್ಮೊಳಗಿದೆ ಗೆಲುವಿನ ಬೆಳಕು' ಇದಕ್ಕೆ ಕೊಟ್ಟ, 'ಬದುಕು ಬೆಳಗುವ ಭಾವ ಚಿತ್ರಗಳು' ಎಂಬ ಉಪಶೀರ್ಷಿಕೆ ವ್ಯಕ್ತಿತ್ವ ವಿಕಾಸವಷ್ಟೇ ಕೃತಿಯ ಆಶಯವಲ್ಲ ಎಂಬುದನ್ನು ಸಾರುತ್ತದೆ. ಅದು ನಿಜ ಕೂಡ. ಈ ಕೃತಿಯಲ್ಲಿ ಲೇಖಕರ ವಿಸ್ತಾರವಾದ ಓದು, ಜೀವನದ ಗ್ರಹಿಕೆ, ವೃತ್ತಿಯ ಅನುಭವ ದ್ರವ್ಯಗಳು ಹೂರಣವಾಗಿ ಕಾಣಿಸಿಕೊಂಡಿವೆ. ಸದ್ಯ ಮರೆಗೆ ಸಲ್ಲುತ್ತಿರುವ ಅಂಚೆ ಕವರುಗಳು, ಇನ್‌ಲ್ಯಾಂಡ್ ಪತ್ರಗಳು ತರುತ್ತಿದ್ದ ಕುಶಲ ವಾರ್ತೆಯ ನವಿರು,ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶಿಯಾಗುವ ಸೂತ್ರಗಳು, ಕಾಲೇಜು ಕೊಠಡಿಗಳ ಡೆಸ್ಕ್ ಕಾವ್ಯಲೋಕ,ವಂಶವೃಕ್ಷದ ಅರ್ಥಾತ್ ಡಿಎನ್‌ಎ ಮೂಲಕ ಬೇರುಗಳ ಹುಡುಕಾಟ, 'ನಾನು ಯಾರು' ಎಂಬ ಮಹಾ ಪ್ರಶ್ನೆಯ ವಿಶ್ಲೇಷಣೆ, ಸಂಸ್ಕೃತಿಯ ಶೋಧ, ಜನಸಮ್ಮರ್ದದ ನಡುವೆ ಏಕಾಂತ ಸಿಗದ ಏಕಾಂಗಿತನ, ಅಪ್ಪ, ಅಮ್ಮ, ಅಜ್ಜ ಅಜ್ಜಿ,ಮಕ್ಕಳು, ಮೊಮ್ಮಕ್ಕಳ ಸಂಬಂಧದ ಕಳಕಳಿ…ಹೀಗೆ ಹತ್ತಾರು ಸಂಗತಿಗಳು ಹೃದ್ಯವಾಗಿ ಅರಳಿಕೊಂಡಿವೆ ಇಲ್ಲಿ.

About the Author

ಸಿಬಂತಿ ಪದ್ಮನಾಭ ಕೆ.ವಿ

ಸಿಬಂತಿ ಪದ್ಮನಾಭ ಕೆ. ವಿ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದವರು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಬಿಎ ವ್ಯಾಸಂಗ , ಆನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯೊಂದಿದ್ದು ಫೆಲೋಶಿಪ್‌ಗೆ ಆಯ್ಕೆಯಾಗಿ,  'ವಿಜಯ್ ಟೈಮ್' ಹಾಗೂ 'ಡೆಕ್ಕನ್ ಹೆರಾಲ್ಡ್' ದೈನಿಕಗಳಲ್ಲಿ ಪತ್ರಕರ್ತರಾಗಿದ್ದರು.   ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಘಟಕ ಸಂಸ್ಥೆ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರಾಗಿದ್ದು, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಯಕ್ಷಗಾನ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. “ಪೊರೆ ಕಳಚಿದ ಮೇಲೆ', 'ತುಮಕೂರು ಜಿಲ್ಲೆಯ ...

READ MORE

Related Books