ಚಂದಮಾಮ ಒಬ್ಬನೇ ಇದ್ದಿಯಾ ?

Author : ಚಂದ್ರಕಾಂತ ಕರದಳ್ಳಿ

Pages 130

₹ 95.00




Year of Publication: 2013
Published by: ವಿಚಾರ ಪ್ರಕಾಶನ
Address: 'ಶಿವ ಪ್ರಸಾದ’, ಲಕ್ಷ್ಮೀ ನಗರ, ಶಹಾಪುರ- 585223
Phone: 08419-243192 / 9448595212

Synopsys

ಮಕ್ಕಳ ಸಾಹಿತಿ ಚಂದ್ರಕಾಂತ ಕರದಳೆಯವರ ’ಚಂದಮಾಮ ಒಬ್ಬನೆ ಇದ್ದಿಯಾ ?’ ಸಂಕಲನದಲ್ಲಿ 51 ಮಕ್ಕಳ ಕವಿತೆಗಳಿವೆ. ಈ ರಚನೆಗಳು ಲವಲವಿಕೆಯಿಂದ ಕೂಡಿದ್ದು, ಕೂತೂಹಲವನ್ನು ಮೂಡಿಸುತ್ತವೆ. ಮಕ್ಕಳಿಗೆ ಆಲೋಚನೆ ಮಾಡಲು ಹಚ್ಚುತ್ತವೆ. ಹತ್ತಾರು ಪ್ರಶ್ನೆಗಳನ್ನು ಕೇಳುವುದರ ಮೂಲಕ ಪರಿಸರ ಪ್ರಜ್ಞೆಯನ್ನು, ಬದುಕಿನ ಅರಿವನ್ನು ಜಾಗೃತಗೊಳಿಸುತ್ತವೆ. ಇಲ್ಲಿ ನಾಲ್ಕು ಸಾಲಿನ ಪದ್ಯಗಳೇ ಜಾಸ್ತಿ. . ಚುಕ್ಕಿ ಚಂದಿರ, ಗುಬ್ಬಚ್ಚಿ, ಒಂಟೆ, ಮಳೆ, ಮೋಡ, ಎಲ್ಲವೂ ಪದ್ಯಗಳಲ್ಲಿವೆ. ಸಿದ್ದಾರ್ಥನ ಕರುಣೆ, ಹೊಳೆ ಹಾಡು, ಬೇಸಿಗೆ, ಜೋಗದ ಹವಾ ಹೀಗೆ ವೈವಿಧ್ಯಮಯ ವಿಷಯಗಳು ಕೂಡ ಜಾಗ ಪಡೆದಿವೆ.

About the Author

ಚಂದ್ರಕಾಂತ ಕರದಳ್ಳಿ
(25 August 1952)

ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ‌ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.  ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...

READ MORE

Related Books