ಉಪನಿಷತ್ತು

Author : ನ. ರವಿಕುಮಾರ್

Pages 28

₹ 50.00




Year of Publication: 2018
Published by: ಪ್ರಣತಿ ಪ್ರಕಾಶನ
Address: ದೊಡ್ಡಹೊಂಡ, ಹೊನ್ನಾವರ ತಾಲ್ಲೂಕು ಉತ್ತರ ಕನ್ನಡ
Phone: 9448804905

Synopsys

ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಆಧ್ಯಾತ್ಮ, ಪುರಾಣ ಇಂತಹ ವಿಚಾರಗಳನ್ನೂ ಮಕ್ಕಳಿಗೆ ತಲುಪಿಸಲು ಕನ್ನಡ ಪುಸ್ತಕಗಳ ಕೊರತೆ ಇದೆ.  ಮಕ್ಕಳ ಮನಸ್ಸು ಅರಳಿಸುವ ಅವರಿಗೆ ಪ್ರಿಯವಾಗುವ ಹಾಗೆ ಹೇಳುವ ಪುಸ್ತಕಗಳು ಕನ್ನಡದಲ್ಲಿ ಅಪರೂಪ. ಈ ನಿಟ್ಟಿನಲ್ಲಿ ಅಭಿನವ ಪ್ರಕಾಶನದ ನ. ರವಿಕುಮಾರ ಅವರು ಸರಳವಾಗಿ ಉಪನಿಷತ್ತಿನ ಸಾರವನ್ನು ಸುಂದರವಾಗಿ ನೀಡಿದ್ದಾರೆ. ಚೆಂದದ ಕಾಗದ, ಚಂದ್ರನಾಥ ಆಚಾರ್ಯರ ಬಣ್ಣದ ಚಿತ್ರಗಳು ಮೊದಲ ನೋಟಕ್ಕೆ ಮಕ್ಕಳ ಮನ ಸೆಳೆಯುತ್ತವೆ. ಚಿತ್ರಗಳನ್ನು ನೋಡುತ್ತಾ ಪುಟ ತಿರುಗಿಸುತ್ತಾ ಹೋದರೆ, ಉಪನಿಷತ್ತುಗಳು ಮಕ್ಕಳ ಮನಸ್ಸಿಗೆ ಮುದ ನೀಡುವಂತೆ ಈ ಪುಸ್ತಕ ರಚಿಸಲಾಗಿದೆ.   

About the Author

ನ. ರವಿಕುಮಾರ್
(02 February 1969)

ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ  500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ,  ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು.  ಕರ್ನಾಟಕ ಪ್ರಕಾಶಕರ ...

READ MORE

Related Books