ಮಂದಾರ ಮಾಲೆ

Author : ರವಿರಾಜ್ ಸಾಗರ್

Pages 64

₹ 60.00




Year of Publication: 2019
Published by: ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ
Address: ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಕೊಡೂರು, ಹೊಸನಗರ(ತಾ), ಶಿವಮೊಗ್ಗ (ಜಿ)-577418
Phone: 9731554955

Synopsys

ಸಾಹಿತ್ಯ ಕೃಷಿಗಿಳಿದ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆಯ ಮಕ್ಕಳ ಬರಹಗಳ ಗುಚ್ಚ ಮಂದಾರ ಮಾಲೆ. ಈ ಶಾಲೆಯ ಶಿಕ್ಷಕರಾದ ರವಿಚಂದ್ರ ಅವರ ಸಂಪಾದಕತ್ವದಲ್ಲಿ ಶಾಲಾ ಮಕ್ಕಳ ಪತ್ರಿಕೆ ಮಂದಾರ ಕನ್ನಡ  ಪ್ರಕಟವಾಗುತ್ತಿದೆ. ಇದರ ವಾರ್ಷಿಕ ಸಂಚಿಕೆ ಮಂದಾರಮಾಲೆಗೆ ಮಕ್ಕಳು ಬರೆದ ಬರಹಗಳನ್ನು ರವಿಚಂದ್ರ ಅವರು ಸಂಪಾದಿಸಿ ಮಂದಾರ ಮಾಲೆ ಹೆಸರಿನಲ್ಲಿ ಸಮಗ್ರ ಸಂಕಲನವಾಗಿ ಪ್ರಕಟಿಸಿದ್ದಾರೆ. ಮಕ್ಕಳು ಬರೆದ ಕವಿತೆ, ಚುಟುಕುಗಳು, ಪ್ರಬಂಧ, ಕಥೆಗಳು ಮುಂತಾದವು ಈ ಕೃತಿಯಲ್ಲಿವೆ. ಮಕ್ಕಳ ಬರಹಗಳು ಸರಳಶೈಲಿಯಲ್ಲಿವೆ. ಮಕ್ಕಳ ಅನುಭವಗಳಿಗೂ ಇಲ್ಲಿ ಬರಹ ರೂಪ ಸಿಕ್ಕಿದೆ.

About the Author

ರವಿರಾಜ್ ಸಾಗರ್
(19 July 1986)

ಶಿಕ್ಷಕ, ಹವ್ಯಾಸಿ ಬರಹಗಾರ ರವಿರಾಜ್ ಸಾಗರ್ ಎಂತಲೇ ಪರಿಚಿತರಾಗಿರುವ ರವಿಚಂದ್ರ ಡಿ. ಅವರು 1986 ಜುಲೈ 19 ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರಾದ ಇವರು ಪ್ರಸ್ತುತ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಕಾಲೇಜು ದಿನಗಳಿಂದಲೇ  ಬರೆಯುವ ಹವ್ಯಾಸ ಬೆಳೆಸಿಕೊಂಡ ರವಿಚಂದ್ರ ಇವರು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಮಲ್ಕಾಪುರ ಸರ್ಕಾರಿ ಶಾಲೆಯ ಮಕ್ಕಳು ಹೊರತರುತ್ತಿರುವ ಮಂದಾರ ಕನ್ನಡ ಮಕ್ಕಳ ಪತ್ರಿಕೆಯನ್ನು ಸಂಪಾದಕರು ...

READ MORE

Related Books