ತಾರೆಗಳ ತೋಟದಿಂದ

Author : ಅಂಜನಾ ಕೃಷ್ಣಪ್ಪ

Pages 80

₹ 60.00




Year of Publication: 2014
Published by: ರೋಹಿಣಿ ಪ್ರಕಾಶನ
Address: ಹೂವಿನಹಡಗಲಿ, ಬಳ್ಳಾರಿ- 583219

Synopsys

‘ತಾರೆಗಳ ತೋಟದಿಂದ’ ಲೇಖಕಿ ಅಂಜನಾ ಕೃಷ್ಣಪ್ಪ ಅವರು ರಚಿಸಿರುವ ಮಕ್ಕಳ ಕವನ ಸಂಕಲನ.ಸುಸಂಸ್ಕೃತ ರಾಜಕೀಯ ಮುತ್ಸದಿ ಎಂ.ಪಿ. ಪ್ರಕಾಶ, ರಾಷ್ಟ್ರಕವಿ ಕುವೆಂಪು ಮೊದಲಾದವರ ವ್ಯಕ್ತಿತ್ವ ಚಿತ್ರಣವನ್ನುಕವನಗಳಲ್ಲಿ ಅನಾವರಣಗೊಳಿಸಿದ್ದಾರೆ. ವೃತ್ತಿಯಲ್ಲಿ ವಿಜ್ಞಾನ ಬೋಧಕಿಯಾಗಿ ಉಸಿರ ಗಾಳಿ ಹೃದಯ ಜಲ ಚಕ್ರ, ಪಚನಾಂಗ ಮೊದಲಾದವನ್ನು  ಕವಿತೆಗಳ ಮೂಲಕ ತಮ್ಮ ವಿಜ್ಞಾನದ ಪಾಠಕ್ಕೂ ಸಾಹಿತ್ಯದ ಲೇಪ ನೀಡಿದ್ದಾರೆ. ಪ್ರಜಾತಂತ್ರ ವಿಜ್ಞಾನ ಸಂಗಾತಿ ಹಾಗೂ ವಿಜ್ಞಾನ ಲೋಕ ಪತ್ರಿಕೆಗಳಲ್ಲಿ ಇವರ ವೈಚಾರಿಕ ಲೇಖನಗಳು ಪ್ರಕಟಗೊಂಡಿವೆ. ಪ್ರಸ್ತುತ ಕವನ ಸಂಕಲನ ಮಕ್ಕಳಿಗೆಂದೇ ರಚಿಸಿದ್ದು, ಸರಳ, ಸುಂದರ ಭಾಷೆಯಿಂದ ಲಾಲಿತ್ಯ ಪಡೆದಿದೆ.

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books