ಜೇನು

Author : ಚನ್ನಪ್ಪ ಎರೇಸೀಮೆ

Pages 60

₹ 6.00




Year of Publication: 1988
Published by: ವಿದ್ಯಾ ಇಲಾಖೆ
Address: ಮೈಸೂರು ಸರ್ಕಾರ, ಮೈಸೂರು

Synopsys

ಪಂಡಿತ ಚನ್ನಪ್ಪ ಎರೇಸೀಮೆ ಅವರು ಬರೆದ ಕೃತಿ-ಜೇನು. ಮಕ್ಕಳಿಗಾಗಿ ಜೇನು ನೋಣ, ಪೆಟ್ಟಿಗೆಗಳು, ಹೂವುಗಳಿಂದ ಮಕರಂದ ಹೊತ್ತು ತರುವ ತರುವ ಜೇನು ನೋಣಗಳು, ಗೂಡುಗಳ ಅದ್ಭುತ ರಚನೆ, ಅಲ್ಲಿ ಸಂಗ್ರವಾಗುವ ಜೇನು, ಅದನ್ನು ಬಿಡಿಸುವ ಬಗೆ, ಜೇನಿನಲ್ಲಿಯ ಔಷಧಿಯ ಗುಣಗಳು ಜೀನಿನ ಸಮಗ್ರ ವಿವರವನ್ನು ಹಂತಹಂತವಾಗಿ ಮಕ್ಕಳಿಗೆ ತಿಳಿಯುವ ರೀತಿಯ ನಿರೂಪಣಾ ಶೈಲಿಯಲ್ಲಿ ಪಂಡಿತ ಚನಮ್ನಪ್ಪ ಎರೇಸೀಮೆ ಅವರು ಬರೆದಿದ್ದಾರೆ. ಮೈಸೂರು ಸರ್ಕಾರದ ವಿದ್ಯಾ ಇಲಾಖೆಯಿಂದ ಬಹುಮಾನ ಪಡೆದ ಕೃತಿ ಇದು. ಅಂದಿನ ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಗ್ರಂಥಾಲಯಗಳಲ್ಲಿ ಈ ಕೃತಿಯನ್ನುಇರಿಸಲು ಅಂದಿನ ಸರ್ಕಾರ (1964) ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿತ್ತು. ಈ ಖೃತಿಯು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡುವ ಉತ್ತಮ ಕೃತಿ ಇದಾಗಿದೆ. 1963ರಲ್ಲಿ ಕೃತಿಯ ಮೊದಲ ಬಾರಿಗೆ ಮುದ್ರಣಗೊಂಡಿತ್ತು. ಪ್ರಸ್ತುತ ಕೃತಿಯು 4ನೇ ಆವೃತ್ತಿಯಾಗಿದೆ.

ಖ್ಯಾತ ಕಾದಂಬರಿಕಾರ ಅ.ನ.ಕೃ. ಅವರು ಈ ಕೃತಿಯ ಬಗ್ಗೆ ‘ಎರೇಸೀಮೆ ಅವರು ಮಕ್ಕಳ ಮನಸ್ಸು, ಅಭಿರುಚಿಗಳನ್ನು ಅರಿತು, ಅವುಗಳಿಗೆ ಅನುಗುಣವಾಗಿ ಬರೆಯಬಲ್ಲ ದಕ್ಷ ಲೇಖಕರಲ್ಲಿ ಒಬ್ಬರು. ಜೇನು -ಪುಸ್ತಕದ ಭಾಷೆ, ನಿರೂಪಣೆ, ಭಾವಾಭಿವ್ಯಕ್ತಿಗಳೆಲ್ಲವೂ ತೃಪ್ತಿಕರವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.  

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books