ಕಾಡಿನ ಮಕ್ಕಳ ಒಡನಾಟದಲ್ಲಿ

Author : ಕ್ಷೀರಸಾಗರ

Pages 146

₹ 75.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560032
Phone: 080-22107734

Synopsys

ಲೇಖಕ ಕ್ಷೀರಸಾಗರ ರವರು ಹಲವಾರು ದಶಕಗಳ ಕಾಲ ಬುಡಕಟ್ಟು ಗಿರಿಜನರೊಂದಿಗೆ ಉತ್ತಮವಾದ ಒಡನಾಟ ಹೊಂದಿದ್ದರು. ಆ ಜನಸಮುದಾಯದ ನೋವು, ನಲಿವು, ವೈಚಿತ್ರ್ಯ, ಸಾಂಸ್ಕೃತಿಕ ಸಿರಿವಂತಿಕೆಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಆಧುನಿಕತೆ ತನ್ನ ಎರಡೂ ಬಲಾಢ್ಯ ರೆಕ್ಕೆಗಳನ್ನು ಬಿಚ್ಚಿ ಗಗನಮುಖಿಯಾಗಿ ಜಿಗಿಯುತ್ತಿದ್ದರೂ ಗಿರಿಜನರು ನಿತ್ಯಶೋಷಣೆಗೆ ಒಳಗಾಗುತಿದ್ದಾರೆ. ಆಧುಕತೆಯ ಹೆಸರಲ್ಲಿ ಬಂದ ಯಾವ ಪರಿಕರಗಳು ಬುಡಕಟ್ಟು ಜನರಿಗೆ ದಕ್ಕಲಿಲ್ಲ ಮತ್ತು ಅಭಿವೃಧ್ಧಿಯನ್ನ ಪರಿಗಣಿಸಲಿಲ್ಲ. ಈ ಎಲ್ಲಾ ಸಂಗತಿಗಳನ್ನು ಈ ಕೃತಿಯಲ್ಲಿ ವಿವರವಾಗಿ ಕಟ್ಟಿಕೊಡಲಾಗಿದೆ.

About the Author

ಕ್ಷೀರಸಾಗರ

ಕ್ಷೀರಸಾಗರ ಅವರು ಸಾವಯವ ಕೃಷಿಕರಾಗಿದ್ದಾರೆ. ಎಂ.ಎ ತತ್ವಶಾಸ್ತ್ರವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಸೀಯಡ್ಸ್ ಬೆಂಗಳೂರು ಪೀಪಲ್ ಟ್ರೀ ಹಾಗೂ ಹೆಗ್ಗಡದೇವನಕೋಟೆಯ ಫೆಡಿನಾ ವಿಕಾಸ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಂಪೂರ್ಣ ಸಾಕ್ಷರತಾ ಆಂದೋಲನದ ಅಡಿಯಲ್ಲಿ ಮೈಸೂರು ಜಿಲ್ಲೆಯ ಸಾಕ್ಷರವಾಹಿನಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರು ಜಿಲ್ಲೆಯ ಲಕ್ಷಾಂತರ ಜನರನ್ನು ಸಾಕ್ಷರರನ್ನಾಗಿ ರೂಪಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಹೆಗ್ಗಡದೇವನಕೋಟೆ ತಾಲೂಕಿನ ಗಿರಿಜನರೊಂದಿಗೆ ಕೃಷಿ ಕೆಲಸ ಮಾಡುತ್ತಿದ್ದಾರೆ.   ಕೃತಿಗಳು:   ಜೇನು ಆಕಾಶದ ಅರಮನೆಯೋ(ಕಾದಂಬರಿ), ದಿಕ್ಕು ತಪ್ಪಿದ  ಕರ್ನಾಟಕ ಭೂ ಸುಧಾರಣೆ((ಸಂಶೋಧನೆ), ಕಾಡಿನ ಮಕ್ಕಳ ಒಡನಾಟದಲ್ಲಿ(ಅನುಭವ ಕಥನ), ಕಾಡಿನ ನಾಡಿ ಮಿಡಿದವರು(ಲೇಖನ ಸಂಗ್ರಹ),  ...

READ MORE

Related Books