ಕಂದ ಕಲಿ ಕವಿತೆಯಿಂದ ( ಮಕ್ಕಳ ಪದ್ಯಗಳು)

Author : ಬಾಗೂರು ಮಾರ್ಕಾಂಡೇಯ

Pages 164

₹ 80.00




Year of Publication: 2010
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು, 560 009
Phone: 08040114455

Synopsys

ಕಂದ ಕಲಿ ಕವಿತೆಯಿಂದ, (ಮಕ್ಕಳ ಪದ್ಯಗಳು)-ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವಿಯ ಸಂಕಲವಿದು. ಒಟ್ಟು 62 ಕವನಗಳಿವೆ. ಮಕ್ಕಳ ಮನೋವಿಕಾಸಕ್ಕೆ ಕಾವ್ಯದ ಮೂಲಕವೂ ಸಂಪನ್ಮೂಲವನ್ನು ಕಟ್ಟಿಕೊಡುವ ಪ್ರಕ್ರಿಯೆಯಂತೆ, ನೀತಿಯನ್ನು ತಿಳಿಸುವಂತೆ, ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತೆ ಇಲ್ಲಿಯ ಕವಿತೆಗಳಿವೆ. ಬಹುತೇಕ ಕವಿತೆಗಳು ಗೀತೆಗಳಾಗಿವೆ. ಸಾಮಾನ್ಯರಿಗೂ ಈ ಮಕ್ಕಳ ಕಾವ್ಯಗಳು ತಲುಪಿವೆ. 

ಮಕ್ಕಳಿಗೆ ಇಷ್ಟವಾಗುವಂಥ ಭಾವಗಳೇ ಇಲ್ಲಿಯ ಸಾರ. ಮಕ್ಕಳ ತುಂಟತನ ಹಾಗೂ ಆಶ್ಟರ್ಯ ಕುತೂಹಲಗಳಂತೆ ವಿಸ್ಮಯ, ವಿಭಿನ್ನ ಭಾವಗಳಲ್ಲಿ ಕವಿತೆ ರಚಿಸಲಾಗಿದೆ. ಬಿಲದ ಗೂಡ ಮಾಡಿನಲ್ಲಿ ಅಡುವಂಥ ಇಲಿಯೆ ನೋಡಲೇಕೆ ಬಂದೆ ನೀನು ಅಡುಗೆ ಮನೆ ಬಳಿಯೆ ಎನ್ನುವ ....ಕವಿತೆ ಹಾಗೂ . ತರತರದ ತರಕಾರಿಗಳು ಒಂದೆಡೆ ಸಭೆಯನು ಸೇರಿದವು ಚೆಂದದ ಯೋಚನೆ ಮಾಡಿದವು ಸಂಘವನೊಂದು ನೋಂದಣಿ ಮಾಡಲು ಒಕ್ಕೊರಲಲ್ಲಿ ಕೂಗಿದವು... ಹೀಗೆ ಮಕ್ಕಳಿಗೆ ವಸ್ತುಗಳು ಮಾತನಾಡುವುದು ಇಷ್ಟ ಅಂತೆಯೇ ಈ ಪುಸ್ತಕದಲ್ಲಿ ಅಂಥದೊಂದೂ ಕುತೂಹಲ ಕವಿತೆಗಳಲ್ಲಿ ಕಾಣಸಿಗುತ್ತದೆ.

ಪಾಂಡಿತ್ಯವಿದ್ದವರು ಕವಿತೆ ಹೊಸೆದು ಬಲವಂತವಾಗಿ ಉಣಬಡಿಸುವಂಥದಲ್ಲ ಶಿಶುಸಾಹಿತ್ಯ. ಮಕ್ಕಳಲ್ಲಿ ಮಕ್ಕಳಾಗಿ ದೊಡ್ಡವರು ಪಡೆಯುವ ವೈವಿಧ್ಯಮಯ ಅನುಭವಗಳನ್ನು ವಿಭಿನ್ನ ಭಾವಗಳಲ್ಲಿ ಸುಲಲಿತವಾಗಿ ಹಾಡುವಂತೆ ಬರೆಯುವುದು, ಆ ಮೂಲಕ ಬಾಲ್ಯವನ್ನು ಪುನರ್ ಸೃಷ್ಠಿಸುವದು ನಿಜವಾದ ಶಿಶುಸಾಹಿತ್ಯ ಎಂದು ಕವಿ ಮಾರ್ಕಾಂಡೇಯ ಅವರು ಕೃತಿಯ ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books