ಜಾಮೂನು ಪದ್ಯಗಳು

Author : ರಘುನಾಥ ಚ ಹ

Pages 56

₹ 80.00

Buy Now


Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಮುಖ್ಯರಸ್ತೆ, ಬೆಂಗಳೂರು
Phone: 08026617100

Synopsys

ರಘುನಾಥ ಅವರು ಮಕ್ಕಳಿಗಾಗಿ ಬರೆದ ಇಲ್ಲಿಯ ಪದ್ಯಗಳಲ್ಲಿ ಸರಳವಾದ ಲಯಬದ್ಧ ಕಾಮನಬಿಲ್ಲಿನಂತಹ ರಂಗನ್ನು ಸಾಧಿಸಿವೆ. ವಾಸ್ತವದ ಮನೋರತವನ್ನು ಮಕ್ಕಳ ಮನಕ್ಕೆ ಕವನಗಳನ್ನು ದಾಟಿಸುತ್ತವೆ. 

‘ಎಲೆಯಿಂದ ಉರುಳಿದರೆ ಹೋಗುವುದಾದರೂ ಎಲ್ಲಿಗೆ? ಎಲ್ಲಿದೆ ಹಳ್ಳ ಎಲ್ಲಿದೆ ಕೊಳ್ಳ ಮುಗಿಯಿತೆ ಬದುಕು ಇಂದಿಗೆ?’ (ಮಳೆ ಹನಿಯ ಅಳು) ಹರಿಯುವ ನೀರು ಒಂದು ಹನಿಯಾಗಿ ಸ್ಥಗಿತಗೊಳ್ಳುವುದು, ತನ್ನ ಮುಂದಿನ ಗತಿಯನ್ನು ನೆನೆದು ಮಳೆಯಹನಿ ಕಂಬನಿ ಕರೆಯುವುದು. ರಘುನಾಥರ ಸೂಕ್ಷ್ಮ ಮತ್ತು ಧ್ವನಿಪೂರ್ಣವಾದ ಕಾವ್ಯ ಸಂವೇದನೆಯ ಮತ್ತು ಪರಿಸರ ಕಾಳಜಿಯ ಮನೋಹರ ಅಭಿವ್ಯಕ್ತಿಯಾಗಿದೆ’ ಎಂದು ಮುನ್ನುಡಿಯಲ್ಲಿ ಶ್ಲಾಘಿಸಿದ್ದಾರೆ ಕವಿ ಎಚ್. ಎಸ್‌. ವೆಂಕಟೇಶಮೂರ್ತಿ.

About the Author

ರಘುನಾಥ ಚ ಹ
(01 October 1974)

ರಘುನಾಥ ಚ.ಹ. ಅವರು ಜನಿಸಿದ್ದು 1974 ನವೆಂಬರ್ 1ರಂದು. ಇವರ ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಾಪುರದವರಾದ ಇವರು ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.  ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ (ಕಥೆಗಳು), ರಾಗಿಮುದ್ದೆ, (ಪ್ರಬಂಧ ಸಂಕಲನ), ಚೆಲ್ಲಾಪಿಲ್ಲಿ(ಲೇಖನಗಳು), ವ್ಯಂಗ್ಯಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ.ದೇವಿ ಶೆಟ್ಟಿ, ಬಿಲ್‌ಗೇಟ್ಸ್, ...

READ MORE

Related Books