ಮಕ್ಕಳಿಗಾಗಿ ಅನುವಾದ

Author : ಎ.ವಿ. ನಾವಡ

₹ 160.00




Year of Publication: 2022
Published by: ಕೇಂದ್ರ ಸಾಹಿತ್ಯ ಅಕಾಡೆಮಿ
Address: ಸೆಂಟ್ರಲ್ ಕಾಲೇಜು ಆವರಣ, ಡಾ. ಬಿ.ಆರ್. ಅಂಬೇಡ್ಕರ್ ಬೀದಿ, ಬೆಂಗಳೂರು - 560001

Synopsys

ಲೇಖಕ ಎ.ವಿ. ನಾವಡ ಅವರ ಮಕ್ಕಳ ಕೈಪಿಡಿ ಮಕ್ಕಳಿಗಾಗಿ ಅನುವಾದ. ಕೃತಿಯ ಬೆನ್ನುಡಿಯಲ್ಲಿ 'ಮಕ್ಕಳ ಸಾಹಿತ್ಯ' ಕನ್ನಡದ ಒಂದು ಪ್ರಮುಖ ಸಾಹಿತ್ಯ ಪ್ರಕಾರ. ಇಂದು ಇಳಿಮುಖವಾಗಿರುವ ಅಥವಾ ಬಳಕೆಯಿಂದ ಜಾರಿಹೋಗುತ್ತಿರು ಸಾಹಿತ್ಯ ಪ್ರಕಾರ ಎನ್ನಬಹುದು. ಅದಕ್ಕೆ ನಮ್ಮ ಶಿಕ್ಷಣ ನೀತಿ, ಸಾಮಾಜಿಕ ಸಂದರ್ಭ ಕಾರಣವಿರಬೇಕು. ಮಕ್ಕಳ ಸಾಹಿತ್ಯವನ್ನು ಹೊಸಕಾಲದ ಅಗತ್ಯಕ್ಕನುಸಾರ ಹೊಸ ವಿನ್ಯಾಸದಲ್ಲಿ ಮಕ್ಕಳಿಗೆ ನೀಡಬೇಕಾಗಿದೆ. ಪಂಜೆ, ತೋನ್ಸೆ, ಹೊಯ್ಸಳ, ಪಳಕಳ, ಎಚ್.ಎಸ್.ವಿ., ನಾ.ಡಿಸೋಜ ಮುಂತಾದವರ ಮಕ್ಕಳ ಪುಸ್ತಕಗಳನ್ನು ಇಂದಿನ ಬಾಲಕರು ಓದುವಂತಾಗಬೇಕು. ಜೊತೆಗೆ ಈ ಬಗೆಯ ಸಾಹಿತ್ಯ ಇ ಮಾಧ್ಯಮಗಳಲ್ಲಿ, ಓದು ಮಸ್ತಕ, ಕೇಳು ಪುಸ್ತಕಗಳ ರೂಪದಲ್ಲಿ ದೊರೆಯುವಂತಾಗಬೇಕು, ಆಕರ್ಷಕ ಚಿತ್ರಗಳ ಹಿನ್ನೆಲೆಯಲ್ಲಿ ಕತೆ ಮೂಡಿಬರಬೇಕು. ಅನ್ಯ ಭಾಷೆಯ ಮಕ್ಕಳ ಸಾಹಿತ್ಯ ಕನ್ನಡದಲ್ಲಿ ಅನುವಾದಗೊಳ್ಳಬೇಕು. ಈ ಬಗೆಯ ಅನೇಕ ಸಾಧ್ಯತೆಗಳನ್ನು ಶೋಧಿಸುವ ಕೆಲಸ ಈ ಪುಸ್ತಕದೊಳಗೆ ನಡೆದಿದೆ ಎಂಬ ಮಾಹಿತಿಯಿದೆ.

About the Author

ಎ.ವಿ. ನಾವಡ
(28 April 1946)

ಎ.ವಿ. ನಾವಡ ಅವರು 1946 ಏಪ್ರಿಲ್ 28ರಲ್ಲಿ ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನೂ ಪಡೆದರು. ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜಿನಲ್ಲಿ 1970ರಿಂದ-94ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ 24 ವರ್ಷ ಸೇವೆ ಸಲ್ಲಿಸಿದರು. 1994ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ, ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ...

READ MORE

Related Books