ತಾಯಿ ಮಕ್ಕಳ ದನಿಯು ತಾಳ ಬಾರಿಸಿದ್ಹಾಂಗ

Author : ಕುರುವ ಬಸವರಾಜ್

Pages 40

₹ 6.00




Year of Publication: 1987
Published by: ಕರ್ನಾಟಕ ಜಾನಪದ ಟ್ರಸ್ಟ್
Address: ನಂ-7, 4ನೇ ಬ್ಲಾಕ್, ಪಶ್ಚಿಮ ಕುಮಾರ ಪಾರ್ಕ್, ಬೆಂಗಳೂರು- 560020

Synopsys

‘ತಾಯಿ ಮಕ್ಕಳ ದನಿಯು ತಾಳ ಬಾರಿಸಿದ್ಹಾಂಗ’ ಜಾನಪದ ತಜ್ಞ,ಲೇಖಕ ಕುರುವ ಬಸವರಾಜ್ ಅವರ ನಾಟಕ.ಈ ಕೃತಿಗೆ ನಾಡೋಜ, ಜಾನಪದ ತಜ್ಞ ಎಚ್.ಎಲ್. ನಾಗೇಗೌಡ ಅವರ ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಹಳ್ಳಿಯ ಬಾಳನ್ನು ಕಂಡುಂಡ ಕುರುವ ಬಸವರಾಜ್ ಗ್ರಾಮೀಣ ಭಾಷೆಯ ದನಿ-ಬನಿ, ಸೊಗಡು-ಸೊಗಸುಗಳನ್ನು ಅರಗಿಸಿಕೊಂಡು ರಚಿಸಿರುವ ಈ ಕಿರುನಾಟಕ ತುಂಬ ಚೆನ್ನಾಗಿದೆ. ಹಾಡು-ನೃತ್ಯಗಳ ರೂಪದಲ್ಲಿರುವ ಇದು ರಂಗದ ಮೇಲೆ ಇನ್ನೂ ಚೆನ್ನಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ ಎಚ್.ಎಲ್. ನಾಗೇಗೌಡ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books