ಜಾನಪದ ಅನುಶೀಲನ

Author : ಅರುಣಕುಮಾರ್ ಎಸ್. ಆರ್.

Pages 86

₹ 30.00




Year of Publication: 1997
Published by: ಪೂರ್ಣ ಪ್ರಕಾಶನ
Address: ಶ್ರೀಗುರು ನಿಲಯ, ಕನ್ಯಾಡಿ, ಧರ್ಮಸ್ಥಳ, ದಕ್ಷಿಣ ಕನ್ನಡ - 574216

Synopsys

‘ಜಾನಪದ ಅನುಶೀಲನ’ ಎಸ್. ಆರ್. ಅರುಣ್ ಕುಮಾರ್ ಅವರ ಜಾನಪದ ಲೇಖನಗಳ ಸಂಕಲನ. ಈ ಕೃತಿಯಲ್ಲಿ ತುಳುನಾಡಿನ ಜಾನಪದದ ಕೆಲವಷ್ಟೇ ಮುಖಗಳನ್ನು ಇಲ್ಲಿಯ ಲೇಖನಗಳು ಒಳಗೊಂಡಿದ್ದರೂ, ಇನ್ನೂ ಇಂಥ ಅನೇಕ ವಿಚಾರಗಳ ಕುರಿತಾದ ಪರ್ಯಾಪ್ತವಾದ ಅಧ್ಯಯನಕ್ಕೆ ಇಂಬುಂಟೆಂಬುದನ್ನು ಇವು ಸಾಬೀತುಪಡಿಸುತ್ತವೆ. ದೇಶ ವಿದೇಶಗಳಲ್ಲಿ ಪ್ರಸ್ತುತ ಪ್ರಚಾರವಾಗುತ್ತಿರುವ ಜಾನಪದ ಶಾಸ್ತ್ರ ಸಿದ್ಧಾಂತಗಳಿಗೆ ಲೇಖಕರು ಅತಿಮಹತ್ವ ನೀಡದೆ, ತಮ್ಮದೇ ಆದ ರೀತಿಯಲ್ಲಿ ಬಹುಜನರಿಗೆ ವಿಚಾರಗಳು ತಲುಪುವ ನಿಟ್ಟಿನಲ್ಲಿ ಬರೆಹಗಳನ್ನು ಕಟ್ಟಿಕೊಟ್ಟಿದ್ದಾರೆ.

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books