ಹೊಂಬಾಳೆ

Author : ಎ.ಎನ್. ಸಿದ್ದೇಶ್ವರಿ

Pages 72

₹ 80.00




Year of Publication: 2018
Published by: ಗಾಯತ್ರಿ ಪ್ರಕಾಶನ
Address: #197/1, 29th ವಾರ್ಡ್, ಚರ್ಚ್ ಹೌಸೆಸ್ ಹತ್ತಿರ, ಬಂಹಟ್ಠಿ, ಕೌಲ್ ಬಜಾರ್, ಬಳ್ಳಾರಿ-583102
Phone: 9480208662

Synopsys

ಹೊಂಬಾಳೆ-ಜಾನಪದ ಸಂಶೋಧನ ಲೇಖನಗಳ ಸಂಗ್ರಹ ಕೃತಿ. ಡಾ. ಎ.ಎನ್. ಸಿದ್ದೇಶ್ವರಿ ಅವರು ಬರೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಪ್ರಾದೇಶಿಕತೆಯ ಹಿನ್ನೆಲೆಯಲ್ಲಿ ಕ್ಷೇತ್ರ ಅಧ್ಯಯನದಮೂಲಕ ನಿರೂಪಿಸಲಾಗಿದೆ.

ದೇವದಾಸಿ ಪದ್ದತಿ, ಜನಪದ ಆಚರಣೆಗಳಲ್ಲಿ ಚಿತ್ರಕಲೆ, ಮಧ್ಯಾಹ್ನ ಮಾರಮ್ಮ:ಸ್ತ್ರೀ ಸಂವೇದನೆ, ಜನಪದ ಹಾಡುಗಳಲ್ಲಿ ದಾಂಪತ್ಯ, ಬಳ್ಳಾರಿ ಪರಿಸರದಲ್ಲಿ ಹೆಣ್ಣು ನೋಡುವ ಸಂಪ್ರದಾಯ, ಅಕ್ಕನ ವಚನಗಳಲ್ಲಿರುವ ಸ್ತ್ರೀ ಸಂವೇದನೆ, ದೊಡ್ಡಗೌರಿ ಹುಣ್ಣಿಮೆ, ವಚನಗಳಲ್ಲಿ ಕುಟುಂಬ ಪರಿಕಲ್ಪನೆ, ಬಳ್ಳಾರಿ ಜಿಲ್ಲೆಯ ಜನಪದ ರಂಗಭೂಮಿಗೆ ಮಹಿಳೆಯರ ಕೊಡುಗೆ -ಈ ಎಲ್ಲ ವಿಷಯ ಗಳನ್ನು ವಿಶ್ಲೇಷಿಸಲಾಗಿದೆ. 

ಹಂಪಿಯ ಕನ್ನಡ ವಿ.ವಿ. ಹಸ್ತಪ್ರತಿ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಅವರು ಬರೆದ ಮುನ್ನುಡಿಯಲ್ಲಿ ‘ಸಾಮಾಜಿಕ-ಕೌಟುಂಬಿಕ ಹಾಗೂ ಸಂಸ್ಕೃತಿಯ ಅನನ್ಯತೆಯ ಭಾಗವಾಗಿ ಇಲ್ಲಿಯ ಜನಪದೀಯ ಆಚರಣೆಗಳು ಹಾಗೂ ಅವುಗಳ ಮಹತ್ವವನ್ನು ಲೇಖಕರು ಗುರುತಿಸಿದ್ದಾರೆ. ಸಾಂಪ್ರದಾಯಿಕವಾಗಿ ಹುಟ್ಟಿಕೊಂಡ ಜಾನಪದೀಯ ಪ್ರತಿ ಆಚರಣೆಯು ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿದ್ದವೆ? ಇಲ್ಲವೇ? ಎಂಬುದನ್ನುಸಂಶೋಧನಾತ್ಮಕವಾಗಿ ವಿಶ್ಲೇಷಿಸಿದ ಒಳನೋಟ, ಪ್ರತಿ ಅಧ್ಯಾಯದಲ್ಲಿ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ.

About the Author

ಎ.ಎನ್. ಸಿದ್ದೇಶ್ವರಿ
(01 June 1970)

ಡಾ. ಎ.ನ್. ಸಿದ್ದೇಶ್ವರಿ ಅವರು ಜಾನಪದ ಸಾಹಿತ್ಯ ಸಂಶೋಧಕರು. ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ತಾಲೂಕು ಘಟಕ ಅಧ್ಯಕ್ಷರು. ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಅಧ್ಯಾಪಕರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ‘ ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು’  ಎಂಬ ‌‌‌ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.  ಪ್ರಕಟಿತ ಕೃತಿಗಳು: ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು ಸುವ್ವೆ ..ಸುವ್ವೆ..ಸುವ್ವಾಲಿ, ಜಾನಪದ ‌‌‌‌‌‌‌‌‌‌ಹೂಬನ, ಬಾಳೆ(ಸಂಶೋಧನಾ ಪ್ರಬಂಧಗಳು)  ನಮ್ಮೂರು ಅಮಕುಂದಿ(ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಪ್ರಕಟಿಸಿದೆ). ಕನ್ನಡ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಹಾಗೂ‌ ಜಾನಪದ ವಿಶ್ವವಿದ್ಯಾಲಯದಲ್ಲಿ 15 ಲೇಖನಗಳು ಪ್ರಕಟವಾಗಿವೆ. ಉಪನ್ಯಾಸ, ಕಾರ್ಯಕ್ರಮ ನಿರೂಪಣೆ ಹಾಗೂ ಸಂಯೋಜನೆ, ಜಾನಪದ ಸಂಶೋಧನೆ ಸಂಪಾದನೆ ಸಂಗ್ರಹಣೆ ಇತ್ಯಾದಿ ಇವರ ಹವ್ಯಾಸಗಳು. ...

READ MORE

Related Books