ಯಕ್ಷ ತರು

Author : ಅಮೃತ ಸೋಮೇಶ್ವರ

Pages 100

₹ 90.00




Year of Publication: 2017
Published by: ಯಕ್ಷಗಾನ ಅಧ್ಯಯನ ಕೇಂದ್ರ,
Address: ಮಂಗಳೂರು ವಿ.ವಿ. ಮಂಗಳೂರು

Synopsys

ಕಳೆದ ಶತಮಾನದ ಕೊನೆಯ ದಶಕದಲ್ಲಿ ಯಕ್ಷಗಾನವು ಕಂಡ ಪುನರ್ ಹೊಂದಾಣಿಕೆಯ ಸಂದರ್ಭದಲ್ಲಿ ಅಮೃತ ಸೋಮೇಶ್ವರರು ನಿರ್ವಹಿಸಿದ ಹೊಣೆಗಾರಿಕೆಯು ಅಪಾರವಾದುದು. ಯಕ್ಷಗಾನದ ರಂಗನಿರ್ಮಿತಿ, ಪರಂಪರೆಯ ಮುಂದುವರಿಕೆಯ ವಿನ್ಯಾಸ ಮತ್ತು ಮೌಲ್ಯಮಂಡನೆ ಈ ಮೂರೂ ಆಯಾಮಗಳಿಗೆ ಅಮೃತರು ನೀಡಿರುವ ಮಹತ್ವದ ಧೋರಣೆಗಳಿಗೆ ಯಕ್ಷತರು ಕೃತಿ ಸೊಗಸಾದ ನಿದರ್ಶನವಾಗಿದೆ. ಯಕ್ಷಗಾನದ ಇತಿಹಾಸ, ಸ್ವರೂಪ, ಪ್ರಸಂಗ ಸಾಹಿತ್ಯ ಪ್ರದರ್ಶನ, ಸಂವಾದಿ ರಂಗಕಲೆ ಹೀಗೆ ಯಕ್ಷಗಾನಕ್ಕೆ ಸಂಬಂಧಪಟ್ಟ 23 ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಈ ಕೃತಿ, ಯಕ್ಷಗಾನದ ನಡೆ, ಕಳೆದ ಶತಮಾನದ ಯಕ್ಷಗಾನದ ಕುರಿತ ಬೀಸುನೋಟ, ಬಹು ಗುಣಗರ್ಭಿತ ಯಕ್ಷಗಾನ ಸಾಹಿತ್ಯ, ನಾಟ್ಯಶಾಸ್ತ್ರದ ನೆರಳಲ್ಲಿ ಬಯಲಾಟದ ಕುರಿತ ಜಿಜ್ಞಾಸೆ, ಯಕ್ಷಗಾನದ ಗತವೈಭವ, ಯಕ್ಷಗಾನದ ಆಹಾರ್ಯ ಭಾಗ, ವಿವಿಧ ಯಕ್ಷಗಾನ ಪ್ರಸಂಗಗಳ ಕುರಿತ ವಿವರಣೆ, ಯಕ್ಷಗಾನ ಲೇಖಕರ ಅವಲೋಕನ, ಭೂತಾರಾಧನೆ ಮತ್ತು ಯಕ್ಷಗಾನದ ನಡುವಿನ ತುಲನೆ, ಜನಮಾನಸದಲ್ಲಿ ಉಳಿದಿರುವ ಯಕ್ಷಗಾನ ಕಲಾವಿದರ ಪರಿಚಯ, ಮಕ್ಕಳು ಮತ್ತು ಮಹಿಳೆಯರ ಯಕ್ಷಗಾನಗಳ ಅವಲೋಕನ, ಶಾಸ್ತ್ರೀಯತೆ ಮತ್ತು ದೇಸೀಯತೆಯ ನಡುವೆ ಯಕ್ಷಗಾನದ ಸ್ಥಿತಿ ಲಯಗಳ ವಿಶ್ಲೇಷಣೆಗಳನ್ನು ಇಲ್ಲಿರುವ ಲೇಖನಗಳಲ್ಲಿ ಕಾಣಬಹುದು. 

 

About the Author

ಅಮೃತ ಸೋಮೇಶ್ವರ
(27 September 1935)

ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಕವಿ, ಕಥೆಗಾರರಾದ ಅಮೃತ ಸೋಮೇಶ್ವರರವರು ಹುಟ್ಟಿದ್ದು 1953 ಸೆಪ್ಟಂಬರ್ 27 ರಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಾತೃಭಾಷೆ ಮಲಯಾಳಂ ಆದರೂ ಸಾಹಿತ್ಯ ರಚನೆಗೆ ತೊಡಗಿದ್ದು ತುಳು ಹಾಗೂ ಕನ್ನಡದಲ್ಲಿ. ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ ಮುಗಿಸಿದ ಅವರು ಪ್ರೌಢ ಶಿಕ್ಷಣವನ್ನ ಆನಂದಾಶ್ರಮದಲ್ಲಿ ಮಾಡಿದ್ದಾರೆ. ಆನಂತರ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಪಡೆದು, ಮದರಾಸು ವಿಶ್ವವಿದ್ಯಾಲಯದಿಂದ ...

READ MORE

Related Books