ರತ್ನ ಪಕ್ಸಿ

Author : ಕೋಟಿಗಾನಹಳ್ಳಿ ರಾಮಯ್ಯ

₹ 100.00




Published by: ಖುತುಮಾನ
Address: ಎ ಬ್ಲಾಕ್‌, ಶಾಂತಿನಿಕೇತನ ಲೇಔಟ್‌, ಅರ್ಕೆರೆ, ಬನ್ನೇರ್‌ಘಟ್ಟ ರಸ್ತೆ, ಬೆಂಗಳೂರು- 560 076
Phone: 9480035877

Synopsys

ಕೋಟಿಗಾನಹಳ್ಳಿ ರಾಮಯ್ಯ ಅವರು ಸಂಪಾದಿಸಿದ ಮಕ್ಕಳ ಸಾಹಿತ್ಯ ಕೃತಿ ʻರತ್ನ ಪಕ್ಸಿʼ. ಬೇರೆ-ಬೇರೆ ಲೇಖಕರು ಬರೆದ ಹಳೆ ಮೈಸೂರು ಪ್ರಾಂತ್ಯದ ಜನಪದ ಕಥೆಗಳನ್ನು ಒಟ್ಟುಸೇರಿಸಿ ಮಕ್ಕಳ ಓದಿಗಾಗಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಬೆಕ್ಕು ಹುಲಿಗೆ ಪಾಠ ಕಳಿಸಿದ್ದು, ಗೀಜಗನ ನ್ಯಾಯ, ಆನೆ ಬಾಲ ಹಿಡ್ದು ದೇವಲೋಕಕ್ಕೆ, ಚಟಪಟ ! ಗರಗರ ! ಕೊತಕೊತ, ರತ್ನ ಪಕ್ಸ, ನೂರೋಂದ್ನೇ ಗಿಣಿ, ಒನಕೆ ದಾಸಪ್ಪ, ತೆಂಗಿನ್ಕಾಯಿ ಚೌಕಾಸಿ, ಕುದ್ರೆ ನೊಣ ರಗುತ್ ಪರೀಕ್ಸೆ, ಎಮ್ಮೆ- ಕಂಬ್ಳಿ ಪಾಲು, ಉಗುರು ಕಣ್ಣಲ್ಲಿ ಅನ್ನ, ಹಾಲು- ನೀರು, ಗೂಬೆಗೆ ಪಟ್ಟ ತಪ್ಪಿದ್ದು, ಪುಟಕ್! ಜರ ಜರ! ಡುಬುಕ್! ಮ್ಯಾ, ದುಡ್ಡು ದುಡ್ಡು, ಗಂಗನಾಗ ಗಂಗ ಸೇರ‍್ತು, ತರ‍್ಲೊ ಮರ‍್ಲೋ ಹೊಯ್, ಚಾಡಿ ಮುಪ್ಪೇ?, ಬೇವು- ಹುಣಸೆ, ಪಿಟ್ಟೆಕಾಟ, ಪಾರ್ವತಿ- ಪರಮೇಶ್ವರರ ಸೋಲು ಹೀಗೆ ಒಟ್ಟು 21 ಶೀರ್ಷಿಕೆಗಳ ಕತೆಗಳಿವೆ.

About the Author

ಕೋಟಿಗಾನಹಳ್ಳಿ ರಾಮಯ್ಯ

ಕೋಲಾರದ ಬಳಿಯ ಕಲ್ಲುಗುಡ್ಡವೊಂದರಲ್ಲಿ ‘ಆದಿಮ’ ಎಂಬ ಸಂಸ್ಥೆ ಕಟ್ಟಿ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಹೊಸದೊಂದು ಚಿಂತನಧಾರೆಯನ್ನು ಸೇರಿಸಿದೆ. ಆ ಮೂಲಕ ಆದಿಮ ಸಮುದಾಯಗಳ ಕಲೆ, ಸಂಸ್ಕೃತಿಗೆ ಹೊಸ ದಾರಿ ತೋರಿಸಿದ ವಿಶಿಷ್ಟ ಲೇಖಕ ರಂಗಕರ್ಮಿ ಶ್ರೀಕೋಟಗಾನಹಳ್ಳಿ ರಾಮಯ್ಯ ಅವರು.  ಮೌಖಿಕ ಪರಂಪರೆಗೆ ದನಿಯಾಗುವ ನಿಟ್ಟಿನಲ್ಲಿ ಹಾಡುಗಾರರಾಗಿ ಗುರುತಿಸಿಕೊಂಡ ರಾಮಯ್ಯನವರು ಬರೆಯಬೇಕೆಂಬ ತಮ್ಮ ಒಳತುಡಿತದಿಂದ ಬಹಳ ಕಾಲ ತಪ್ಪಿಸಿಕೊಳ್ಳಲಾಗಲಿಲ್ಲ. ಸದ್ದಿಗಂಜುವ ಬುದ್ಧ ಎಂಬ ಕವಿತೆಯಮೂಲಕ ಬರವಣಿಗೆ ಆರಂಭಿಸಿದ ಕೆ. ರಾಮಯ್ಯ ಅವರು ಮುಂದೆ ಅನೇಕ ನಾಟಕಗಳನ್ನು ಬರೆದರು. ಶಿಕ್ಷಣದ ಮಹತ್ವ, ಸಮಾನತೆ, ಸಾಮಾಜಿಕ ಅನಿಷ್ಟಗಳನ್ನು ಕುರಿತು ಅವರು ಬರೆದ ...

READ MORE

Related Books