ಪಾರಿಜಾತದವರು

Author : ಶ್ರೀರಾಮ ಇಟ್ಟಣ್ಣವರ

Pages 90

₹ 20.00




Year of Publication: 1990
Published by: ವಿನಿ ಪ್ರಕಾಶನ
Address: ಸರೋಜಾ ಇಟ್ಟಣ್ಣವರ, ಬೀಳಗಿ, ಬಾಗಲಕೋಟ ಜಿಲ್ಲೆ 

Synopsys

ಜಾನಪದ ವಿದ್ವಾಂಸ ಶ್ರೀರಾಮ ಇಟ್ಟಣ್ಣವರ ಅವರ ಜಾನಪದ ನಾಟಕ  ಕೃತಿ-ʼಪಾರಿಜಾತದವರುʼ ನಾಟಕ ಪ್ರಪಂಚದಲ್ಲಿಯೇ ಹೊಸ ಪ್ರಯೋಗವನ್ನು ಸೃಷ್ಟಿಸಿದ ಜಾನಪದ ನಾಟಕ ಪ್ರಕಾರವಾಗಿದೆ. ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಇಬ್ಬರಿಗೂ ಸಲ್ಲಬಹುದಾದ ನಾಟಕವಿದಾಗಿದೆ. ಪಾರಿಜಾತ ಕಲಾವಿದರು ಅನುಭವಿಸುವ ಕಷ್ಟ-ನಷ್ಟಗಳ ಸಂಗಡವೇ ಈ ಕಲಾವಿದರು ಅನುಭವಿಸುವ ಅನಂತ ರಂಗಸುಖವೂ ಇಲ್ಲಿ ಬಿಂಬಿಸಲ್ಪಟ್ಟಿದೆ. ಹುನಗುಂದದ ಧ್ರುವರಂಗ ಹಾಗೂ ಬಾಗಲಕೋಟೆಯ ವಾಸುದೇವ ವಿನೋದಿನಿ ನಟ್ಯ ಸಭೆಯವರಿಂದ ಹಲವು ಪ್ರಯೋಗ ಕಂಡಿವೆ.  ಈ ಕೃತಿಗೆ ಮುನ್ನುಡಿ ಬರೆದಿರುವ ಪ್ರಭಾಕರ ಕುಲಕರ್ಣಿ, ಪತ್ರಿಯೊಂದು ವಸ್ತುವಿನಲ್ಲೂ ಹೊಸತನ ಹಾಗೂ ಗಟ್ಟಿತನವಿದೆ ಹೇಳಿರುವ ರೀತಿ ಕೂಡ ಅಷ್ಟೇ ಸಮರ್ಪಕಾತ್ಮಕವಾಗಿದೆ. ಜಾನಪದ ವಿಚಾರಗಳ ಹಿಂದಿರುವ ನೋವು, ವಿವಿಧ ಮಾನಸಿಕ ತುಮುಲಗಳು, ಸಂಘರ್ಷ ಇವೆಲ್ಲವುಗಳನ್ನು ಮೀರಿ ಶ್ರೀ ಕೃಷ್ಣ ಪಾರಿಜಾತದ ಬಗ್ಗೆ ಇರುವ ಅಗಮ್ಯವಾದ ಸೆಳೆತ ಹಾಗೂ ಆಕರ್ಷಣೆಯನ್ನು ಓದುಗರ ಮುಂದೆ ಬಿಚ್ಚಿಡುತ್ತದೆ ಈ ನಾಟಕ ಪ್ರಕಾರ. ಶ್ರೀ ಕೃಷ್ಣ ಪಾರಿಜಾತದ ಪ್ರತಿ ಪ್ರಯೋಗದ ಹಾಗೂ ಅವರ ಒಟ್ಟು ಸಂಘಟನೆಯ ಹಿಂದಿರುವ ಮಾನವೀಯ ಮೌಲ್ಯಗಳ ಸ್ಪಂದನ ಸ್ಪಷ್ಟವಾಗಿ ನಾವು ಇಲ್ಲಿ ಕಾಣಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.  .

 

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books