ಜನಪ್ರಿಯ ಜಾಣಪದ ಜಾಣ್ಮೆ

Author : ಜೀನಹಳ್ಳಿ ಸಿದ್ಧಲಿಂಗಪ್ಪ

Pages 68

₹ 50.00




Year of Publication: 2018
Published by: ಪ್ರೇಮ ಪ್ರಕಾಶನ
Address: 90, ಬೆಳಕು, ವಿವೇಕಾನಂದ ಬ್ಲಾಕ್, ಶಿಕ್ಷಕರ ಬಡಾವಣೆ, ಮೈಸೂರು- 570029
Phone: 9886026085

Synopsys

‘ಜನಪ್ರಿಯ ಜಾಣಪದ ಜಾಣ್ಮೆ’ ಜನಪದ ಗಣಿತ ಮತ್ತು ಭಾಷಾ ಚಮತ್ಕಾರಗಳ ಸಂಕಲನ. ಈ ಕೃತಿಯನ್ನು ಹಿರಿಯ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ಸಂಪಾದಿಸಿದ್ದಾರೆ. ಜನಪದ ಗಣಿತ ಮೌಖಿಕ ಸಂಪ್ರದಾಯದಲ್ಲಿ ಒಬ್ಬರಿಂದೊಬ್ಬರಿಗೆ ಅವರವರ ವಾಕ್ ಚಾತುರ್ಯ, ವ್ಯವಹಾರ ಚಾಣಾಕ್ಷತೆ, ತಂತ್ರಜ್ಞಾನ ಹಾಗೂ ಸೂಕ್ಷ್ಮತೆಯಿಂದೊಡಗೂಡಿದ ಜಾಣತನ ಮೊದಲಾದ ಅಧಿಪತ್ಯದ ಮೇಲೆ ಉಳಿದು ಬಂದಿದೆ. ಬೆಳೆದು ನಿಂತಿದೆ. ಮಾನವನ ಬದುಕು ಲೆಕ್ಕಾಚಾರದ ಹಂದರದಲ್ಲಿ ಸಾಗುತ್ತಿರುವುದರ ನಿಮಿತ್ತ ಅವನ ಉಸಿರಿನ ದ್ಯೋತಕವಾಗಿ, ಬದುಕಿನ ಅಂಗವಾಗಿ, ವ್ಯವಹಾರದ ಸಂಗವಾಗಿ, ಮನರಂಜನೆಯ ರಂಗವಾಗಿ, ವಿನೋದದ ಸ್ಫೂರ್ತಿಯ ಸೆಲೆಯಾಗಿ, ಪಂದ್ಯ ಪಣಗಳಲ್ಲಿನ ಸಂದರ್ಭದ ಸ್ಪರ್ಧಾರೂಪಕವಾಗಿ. ಮನುಷ್ಯನ ಬುದ್ಧಿ ಮಟ್ಟಕ್ಕೆ ಕೇಂದ್ರಬಿಂದುವಾಗಿ, ವಯೋಮಾನಕ್ಕೆ ತಕ್ಕಂತೆ ಅವರವರ ಅನುಭವದ ನೆಲೆಯಲ್ಲಿ ಈ ಗಣಿತ ಕಂಡುಬರುತ್ತದೆ.

ಜನಪದರು ತಮ್ಮ ದಿನನಿತ್ಯದ ಬದುಕಿನಿಂದ ಹಾಗೂ ಮಹಾಭಾರತ, ರಾಮಾಯಣ, ಭಾಗವತ, ಪುರಾಣ ಮೊದಲಾದವುಗಳ ಜ್ಞಾನಸಂಪತ್ತಿನಿಂದ ಆಯ್ದುಕೊಂಡು ಶಬ್ದ, ಅರ್ಥ, ಧ್ವನಿಗಳ ಮೂಲಕ ಭಾಷಾ ಚಮತ್ಕಾರಗಳನ್ನು ನಿರೂಪಣೆಗೈದಿದ್ದಾರೆ. ಅಂಕೆ ಸಂಖ್ಯೆಗಳೊಂದಿಗಿನ ಗಣಿತ ಒಂದು ಬಗೆಯದಾದರೆ ಭಾಷೆಯೊಳಗಿನ ಒಡನಾಟದ ಭಾಷಾ ಚಮತ್ಕಾರಗಳದು ಮತ್ತೊಂದು ಬಗೆಯದಾಗಿದೆ. ಈ ಎಲ್ಲವುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಲೇಖಕರು ಈ ಕೃತಿಯಲ್ಲಿ ಸಂಕಲಿಸಿದ್ದಾರೆ. 

About the Author

ಜೀನಹಳ್ಳಿ ಸಿದ್ಧಲಿಂಗಪ್ಪ
(17 May 1958)

ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ದಾವಣಗೆರೆ ಜಿಲ್ಲೆಯ, ನ್ಯಾಮತಿ ತಾಲೂಕಿನ ಜೀನಹಳ್ಳಿಯವರು. ತಂದೆ- ಎಂ. ತೀರ್ಥಪ್ಪ, ತಾಯಿ- ನಿಂಗಮ್ಮ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಜೀನಹಳ್ಳಿಯಲ್ಲಿ ಹಾಗೂ ಪಿ.ಯು.ಸಿಯನ್ನು ನ್ಯಾಮತಿಯಲ್ಲಿ, ಬಿ.ಎ.ಪದವಿಯನ್ನು ಶಿವಮೊಗ್ಗದಲ್ಲಿ ಪೂರ್ಣಗೊಳಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದರು. ಶಿಕಾರಿಪುರ, ಬೆಮಿಲ್ ಖೇಡ(ಹುಮನಾಬಾದ ತಾಲೂಕು) ಅಜ್ಜಂಪುರ ಕಾಲೇಜುಗಳಲ್ಲಿ ಗುತ್ತಿಗೆ ಕನ್ನಡ ಉಪನ್ಯಾಸಕರಾಗಿ(1980-1983) ಕಾರ್ಯನಿರ್ವಹಿಸಿದರು. 1983 ರಲ್ಲಿ ಸರಕಾರಿ ಕೆಲಸಕ್ಕೆ ಸೇರಿ ಬೆಂಗಳೂರು, ಮೈಸೂರಿನ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅಧೀಕ್ಷಕರು, ಪತ್ರಾಂಕಿತ ವ್ಯವಸ್ಥಾಪಕರು, ಪತ್ರಾಂಕಿತ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜನಪದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ...

READ MORE

Related Books