ಜಾನಪದ ದೃಷ್ಟಿ

Author : ಶ್ರೀಶೈಲ ನಾಗರಾಳ

Pages 120

₹ 110.00




Year of Publication: 2021
Published by: ಸಿದ್ದಲಿಂಗೇಶ್ವರ ಪ್ರಕಾಶನ
Address: ಕಲ್ಬುರ್ಗಿ

Synopsys

ಡಾ. ಶ್ರೀಶೈಲ್ ನಾಗರಾಳ ಅವರ "ಜಾನಪದ ದೃಷ್ಟಿ "ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ 14 ಲೇಖನಗಳು ಇದ್ದು, ವಿಶ್ವವ್ಯಾಪಿಯಾದ ಜಾನಪದವನ್ನು ಎಲ್ಲಾ ದೇಶಕಾಲ ಜನಸಮುದಾಯಗಳಲ್ಲಿ ಯಾವ ರೀತಿಯಲ್ಲಿ ಒಂದೇ ಪರವಾಗಿಲ್ಲವೇ ಅಂತೆಯೇ ಲೋಕದೃಷ್ಟಿಯ ಬಗೆಗಿನ ರೂಪ,ಸ್ವರೂಪವೂ ಒಂದೇ ರೀತಿಯಾಗಿಲ್ಲ. ಜಗತ್ತಿನಲ್ಲಿ ಬೇರೆ ಬೇರೆ ದೇಶಗಳ ಜನಪದರಿಗೆ ತಕ್ಕಂತೆ ಅನೇಕತೆಯನ್ನು ಹೊಂದಿದೆ.ಅಷ್ಟೇ ಏಕೆ ಒಂದೇ ಕಾಲದ ಒಂದೇ ಪ್ರದೇಶದ,ಒಂದೇ ಸಮುದಾಯದ ಜೀವನಕ್ರಮ ವರ್ತನೆಗಳ ಬಗೆಗೂ ಜಾನಪದ ದೃಷ್ಟಿಯಲ್ಲಿ ಲೇಖನಗಳು ಇರುವುದನ್ನು ಕಾಣುತ್ತೇವೆ. ಅಲ್ಲದೆ ಜನಪದ ಸಂಸ್ಕೃತಿ ಮತ್ತು ಸಮುದಾಯ, ಜನಪದ ತಂತ್ರಜ್ಞಾನ, ಜನಪದರು -ಶರಣರು ಮತ್ತು ಸೂಪಿಸಂತರು, ಜನಪದ ಜೀವಧ್ವನಿ ಕಡಕೋಳ ಮಡಿವಾಳಪ್ಪ, ಜನಪದ ಕವಿ ಬೆನೂರು ಕಾಕಿಪಿರ, ಮುಂತಾದ ಲೇಖನಗಳು ಗಮನಸೆಳೆಯುತ್ತವೆ. ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 120 ಪುಟಗಳಿದ್ದು,110 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

About the Author

ಶ್ರೀಶೈಲ ನಾಗರಾಳ
(01 June 1961)

ಲೇಖಕ ಡಾ. ಶ್ರೀಶೈಲ ನಾಗರಾಳ ಅವರು ಮೂಲತಃ ಅವಿಭಜಿತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಬಳಿಯ ಇಜೇರಿ ಗ್ರಾಮದವರು. ತಂದೆ- ಯಮನಪ್ಪ. ತಾಯಿ- ಬಸಮ್ಮ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಾಥಮಿಕ ದಿಂದ ಪದವಿವರೆಗೂ  ಶಿಕ್ಷಣ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವೀಧರರು. ಡಾ ಎಂ ಎಂ ಕಲಬುರಗಿ ಅವರ ವೀರಶೈವ ಸಾಹಿತ್ಯ ಸಂಶೋಧನೆ (2001) ಕುರಿತು ಎಂ.ಫಿಲ್ ನಂತರ  'ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಜೀವನ ಮತ್ತು ಕೃತಿಗಳು' ವಿಷಯವಾಗಿ ಪಿ.ಎಚ್.ಡಿ  (2007) ಪದವೀಧರರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಜಿ.ಡಿ.ಎ.ಎಸ್ (ಡಾ. ಅಂಬೇಡ್ಕರ್ ಸ್ಟಡಿ) ಪದವೀಧರರು. ಕನ್ನಡ ಜಾನಪದ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ...

READ MORE

Related Books