ಹಿರಿಯೂರು ಸೀಮೆ

Author : ಎಂ.ಜಿ. ರಂಗಸ್ವಾಮಿ

Pages 230

₹ 272.00




Year of Publication: 2014
Published by: ಸಿವಿಜಿ ಇಂಡಿಯಾ
Address: ಕಸ್ತೂರ್ ಬಾ ಭವನ, ಗಾಂಧಿಭವನ ಆವರಣ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001

Synopsys

`ಹಿರಿಯೂರು ಸೀಮೆ' ಎಂ.ಜಿ ರಂಗಸ್ವಾಮಿ ಅವರ ಕೃತಿಯಾಗಿದೆ. ಗ್ರಾಮದ ಸಂಸ್ಕೃತಿಯನ್ನು ರೂಪಿಸುವಲ್ಲಿ ಗ್ರಾಮದೇವತೆಯೋ, ಯಾವುದೋ ಒಂದು ಅಧಿದೈವವೋ ಪ್ರಮುಖ ಪಾತ್ರವಹಿಸುತ್ತದೆ. ಒಂದು ಗ್ರಾಮದ ಆತ್ಮವೇ ಆ ದೈವದ ಆರಾಧನೆ, ಆಚರಣೆಗಳಲ್ಲಿ ಅಡಗಿರುತ್ತದೆ. ಹಿರಿಯೂರು ಸೀಮೆಯ ಎಲ್ಲ ಗ್ರಾಮ ದೈವಗಳನ್ನು ವ್ಯಾಪಕವಾದ ಹೀಗಾಗಿ ರಂಗಸ್ವಾಮಿಯವರು ಕ್ಷೇತ್ರಕಾರ್ಯದ ಮೂಲಕ ಅಧ್ಯಯನ ನಡೆಸಿದ್ದಾರೆ, ಅವುಗಳ ಐತಿಹ್ಯಗಳನ್ನೆಲ್ಲ ಕೆದಕಿದ್ದಾರೆ. ಹೀಗಾಗಿ ಇಲ್ಲಿ ಜನಪದ ದೈವಗಳ ಒಂದು ಮೆರವಣಿಗೆ ಸಾಗಿದೆ. ಹೀಗಾಗಿ ಈ ದೈವಗಳ ಅಧ್ಯಯನದ ಮೂಲಕ ಆ ಹಳ್ಳಿಗಳ ಆತ್ಮವನ್ನೇ ಬಿಚ್ಚಿಟ್ಟು ನಿಜವಾದ ಜನಪದ ಸಂಸ್ಕೃತಿಯ ದರ್ಶನ ಮಾಡಿಸಿದ್ದಾರೆ. ಹಾಗೂ ಈ ಸೀಮೆಯ ಸಂಸ್ಕೃತಿಯನ್ನು ರೂಪಿಸುವಲ್ಲಿ ದೈವಗಳಷ್ಟೇ ಪ್ರಮುಖ ಪಾತ್ರವಹಿಸಿದ ಅನೇಕ ಧೀಮಂತ ವ್ಯಕ್ತಿಗಳ ಜೀವನ ಚಿತ್ರಣದ ಮೂಲಕ ಹಿರಿಯೂರು ಸೀಮೆಯ ಅಧ್ಯಯನಕ್ಕೆ ಒಂದು ಪರಿಪೂರ್ಣತೆಯನ್ನು ತಂದಿದ್ದಾರೆ ಎನ್ನುತ್ತಾರೆ ಮೀರಾಸಾಬಿಹಳ್ಳಿ ಶಿವಣ್ಣ.

About the Author

ಎಂ.ಜಿ. ರಂಗಸ್ವಾಮಿ
(25 March 1962)

ಎಂ.ಜಿ. ರಂಗಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ 25 ,03,1962 ರಂದು ಜನಿಸಿದರು. ತಂದೆ ಆರ್. ಗುಡುವಯ್ಯ, ತಾಯಿ ಎಂ.ರಂಗಮ್ಮ. ಸ್ವಗ್ರಾಮ ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣವನ್ನು ಪೂರೈಸಿ, ಮೈಸೂರು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ, ಪದವಿ, ಮಾನಸ ಗಂಗೋತ್ರಿಯಲ್ಲಿ ಡಿಪ್ಲೋಮಾ-ಇನ್-ಇಂಗ್ಲಿಷ್ ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದರು. ಮೂವತ್ತೈದು ವರ್ಷಗಳ ಕಾಲ ಹಿರಿಯೂರು ತಾಲ್ಲೂಕು ಧರ್ಮಪುರ ಗ್ರಾಮದ ಶ್ರೀಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಮಾರ್ಚ್ 31, 2022 ರಂದು ನಿವೃತ್ತರಾಗಿದ್ದಾರೆ. ಇವರ ...

READ MORE

Related Books