ಜಾನಪದ ದರ್ಪಣ

Author : ಚಿ.ಸಿ. ನಿಂಗಣ್ಣ

Pages 126

₹ 120.00




Year of Publication: 2019
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಕಲಬುರಗಿ

Synopsys

ಲೇಕಕ ಡಾ. ಚಿ.ಸಿ. ನಿಂಗಣ್ಣ ಅವರ ಕೃತಿ-ಜಾನಪದ ದರ್ಪಣ. ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಒಂಬತ್ತು ಪ್ರಮುಖ ಲೇಖನಗಳನ್ನು ಒಳಗೊಂಡಿದೆ. ಜಾನಪದ ಸುಗ್ಗಿ ಹಬ್ಬ ವರ್ಷವಿಡೀ ನಡೆದು ಜನಪದ ಸಂಸ್ಕೃತಿಯನ್ನು ಕಟ್ಟಲು ಹೇಗೆ ನಾಂದಿಯಾಯಿತು. ಕಾಯಕಯೋಗಿ ಪರೋಪಕಾರಿ ರೈತರು, ಜನಪದ ಕಲೆಗಳಲ್ಲಿ ಜನಪದರು ಸಾಮಾಜಿಕ ಮೌಲ್ಯಗಳನ್ನು ಹೇಗೆ ಗಟ್ಟಿಗೊಳಿಸಿದರು. ಆಧುನಿಕತೆಯ ಸಂದರ್ಭದಲ್ಲಿ ಜಾಗತೀಕರಣದ ಹಾವಳಿಯಿಂದ ನಮ್ಮ ರೈತರು ಪಡುವ ಸಂಕಟ ಸಮಸ್ಯೆಗಳು, ನಮ್ಮ ಸರ್ಕಾರಗಳು ಕೃಷಿ ಬಗ್ಗೆ ತೋರಿರುವ ನಿರ್ಲಕ್ಷ ಧೋರಣೆಗಳು ಹೀಗೆ ವಸ್ತು ವೈವಿಧ್ಯತೆಯ ಲೇಖನಗಳಿವೆ. ಗ್ರಾಮೀಣ ಕೃಷಿಕರು ಅನ್ನದಾತರು. ಆದರೆ, ಅವರ ಬದುಕು ಈಗ ದಯನೀಯವಾಗಿದೆ. ಆಧುನಿಕ ಜೀವನಶೈಲಿ ಮತ್ತು ಸರ್ಕಾರಗಳ ಬಂಡವಾಳಶಾಹಿತನಗಳಿಗೆ ಮೋಸ ಹೋಗುತ್ತಿದ್ದಾರೆ. ಇವು ಲೇಖನಗಳ ವಸ್ತುವಾಗಿವೆ.

About the Author

ಚಿ.ಸಿ. ನಿಂಗಣ್ಣ

ಲೇಖಕ ಡಾ. ಸಿ. ಚಿ. ನಿಂಗಣ್ಣ ಅವರು ಮೂಲತಃ ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಚೆಯಲ್ಲಿ ಪಡೆದರು. “ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ” ವಿಷಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಸದ್ಯ, ಕಲಬುರಗಿಯ  ಸಂತ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕ.ಸಾ.ಪ. ಸಾಹಿತ್ಯ ಸಂಚಾಲಕರಾಗಿದ್ದು, ವಚನಸಾಹಿತ್ಯ, ಜಾನಪದ ಹಾಗೂ ವಿಮರ್ಶೆ ವಲಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ (ಮಹಾಪ್ರಬಂಧ) ಕನ್ನಡ ವ್ಯಾಕರಣ, ಬಡವರ ಬಂಗಾರ, ಶಿವಾಜಿ, ಹಬ್ಬಗಳು, ಸ್ಪಂದನ, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ ...

READ MORE

Related Books