ರಾಶಿ ಬುತ್ತಿ

Author : ವೀರೇಶ ಬಡಿಗೇರ

Pages 34

₹ 10.00




Year of Publication: 1997
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯು ಕೃಷಿ ಸಂಬಂಧಿತ ಆಚರಣೆಯೊಂದರ ವಿವರಣೆಯಾಗಿದ್ದು, ಕೃಷಿಯ ಪ್ರತಿಯೊಂದು ಹಂತವು ಭೂತಾಯಿ ಎನ್ನುವ ಪರಂಪರೆಯಡಿ ದೈವಿಕ ನೆಲೆಯನ್ನು ಪಡೆಯುತ್ತದೆ. ಅದೇ ರೀತಿ ಕೃಷಿ ಚಟುವಟಿಕೆಯ ಕೊನೆ ಹಂತವಾದ ರಾಶಿಪೂಜೆಯ ವಿವರಗಳು ಈ ಕೃತಿಯಲ್ಲಿವೆ. ಬೆಳೆಯ ಕೊಯ್ಲಿನಿಂದ ಹಿಡಿದು ಗೂಡು ಬಡಿಯುವುದು, ತೆನೆ ಮುರಿಯುವುದು, ರಾಶಿ ಮಾಡುವುದು, ರಾಶಿ ಮನೆಗೆ ತರುವುದು... ಇವೆಲ್ಲ ರಾಶಿಪೂಜೆಯ ಹಂತದಲ್ಲಿ ಅಡಕಗೊಡಿರುವುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books