
ಆನೇಕಲ್ ತಾಲೂಕಿನ ಪ್ರಾಚೀನ ಇತಿಹಾಸವನ್ನು ಚಿತ್ರಿಸುವ ಕೃತಿ-ಆನೆನಾಡು. ಲೇಖಕ ಡಾ. ಪಿ.ವಿ.ಕೃಷ್ಣಮೂರ್ತಿ ಅವರು ಆನೇಕಲ್ ತಾಲೂಕು ಪ್ರಾಗೈತಿಹಾಸಿಕ, ಗಂಗ, ಚೋಳ, ಹೊಯ್ಸಳ, ಕರ್ಕಡ ಮಾರಾಯರು (ಪೂರ್ವಾದಿರಾಯರು), ವಿಜಯನಗರ, ಪಾಳೆಯಗಾರರು (ಸುಗುಟೂರು ಪ್ರಭುಗಳು), ಹೈದರ್, ಟಿಪ್ಪೂ, ಮೈಸೂರು ಒಡೆಯರ ಆಳ್ವಿಕೆಯವರೆಗೆ ಶಾಸನಗಳ ಆಧಾರದಿಂದ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಬನ್ನೇರುಘಟ್ಟ ಕ್ಷೇತ್ರದ ಬಗ್ಗೆ ಹಾಗೂ ಆನೇಕಲ್ ತಾಲ್ಲೂಕಿನ ಪ್ರಾಚೀನ ಮತ್ತು ಅರ್ವಾಚೀನ ಕಾಲದ ಕವಿ, ಸಾಹಿತಿ, ಬರಹಗಾರರ ಸಂಕ್ಷಿಪ್ತ ಪರಿಚಯವನ್ನುಈ ಕೃತಿ ಒಳಗೊಂಡಿದೆ. ,
©2025 Book Brahma Private Limited.