ಅಮೃತಧಾರೆ

Author : ನಾಗತಿಹಳ್ಳಿ ಚಂದ್ರಶೇಖರ್‌

Pages 196

₹ 200.00




Year of Publication: 2021
Published by: ಅಭಿವ್ಯಕ್ತಿ ಸಂಸ್ಕೃತಿಕ ವೇದಿಕೆ

Synopsys

ಕಥೆಗಾರ, ಲೇಖಕ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರ ಕೃತಿ-ಅಮೃತಧಾರೆ. ನೈಜ ಘಟನೆಯನ್ನು ಚಿತ್ರಕಥೆಯಾಗಿಸುವುದು ಹೇಗೆ? ಎಂಬುದು ಈ ಕೃತಿಯ ಉಪಶೀರ್ಷಿಕೆ. ಈ ಕೃತಿಯು ಸಿನಿಮಾ, ಬದುಕಿನ ಬಗ್ಗೆ ಆಸೆ ಹುಟ್ಟಿಸುವ ಪ್ರೇಮ ಹಾಗೂ ಅನಿವಾರ್ಯ ವಾಸ್ತವವಾದ ಸಾವನ್ನು ಎದುರುಗೊಳ್ಳುವ ದಿಟ್ಟ ಹೆಣ್ಣು ಹಾಗೂ ಆಕೆಯ ಸಂಗಾತಿಯ ಕಥೆ. ನೈಜ ಘಟನೆಯನ್ನು ಚಿತ್ರಕಥೆಯಾಗಿಸುವುದು ಹೇಗೆ..? ಎಂಬುದರ ಚಿತ್ರಣ ಕಟ್ಟಿಕೊಡುವ ಕೃತಿ. 

About the Author

ನಾಗತಿಹಳ್ಳಿ ಚಂದ್ರಶೇಖರ್‌
(15 August 1958)

ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...

READ MORE

Related Books