ಬೆಟ್ಟದ ಹೂವು

Author : ಸಿರಿಗೇರಿ ಯರಿಸ್ವಾಮಿ

Pages 324

₹ 300.00




Year of Publication: 2021
Published by: ಅನ್ನಪೂರ್ಣ ಪ್ರಕಾಶನ
Address: ಸಿರಿಗೇರಿ-583120, ಸಿರಗುಪ್ಪಾ ತಾಲೂಕು, ಬಳ್ಳಾರಿ ಜಿಲ್ಲೆ

Synopsys

ಲೇಖಕ ಸಿರಿಗೇರಿ ಯರಿಸ್ವಾಮಿ ಅವರ ಕೃತಿ-ಬೆಟ್ಟದ ಹೂವು. ಕನ್ನಡ ಸಿನಿಮಾ ರಂಗದ ನಟ ಪುನೀತ್ ರಾಜಕುಮಾರ್ ಅವರು ಹಠಾತ್ ಹೃದಯಾಘಾತದಿಂದ ಮರಣ ಹೊಂದಿದ್ದು, ಕನ್ನಡ ಚಲನಚಿತ್ರ ರಂಗಕ್ಕೆ ಹಾನಿ ಅಪಾರ. ಈ ಕುರಿತಂತೆ, ವಿವಿಧೆಡೆ ಬಂದಿರುವ ಬರಹಗಳನ್ನು ಸಿರಿಗೇರಿ ಯರಿಸ್ವಾಮಿ ಅವರು ಸಂಪಾದಿಸಿದ್ದೇ ಈ ಕೃತಿ. ನಟ ಪುನೀತ್ ರಾಜಕುಮರ್ ಅವರ ಸಿನಿಮಾ ನಟನೆ, ಸಮಾಜ ಸೇವೆಯ ವೈಖರಿ ಸೇರಿದಂತೆ ಮಾನವೀಯ ಸೇವೆಯ ಇತರೆ ಪರಿಗಳ ಆಯಾಮಗಳನ್ನು ಪರಿಚಯಿಸುವ ಕೃತಿ ಇದು.

About the Author

ಸಿರಿಗೇರಿ ಯರಿಸ್ವಾಮಿ

ಲೇಖಕ ಸಿರಿಗೇರಿ ಯರಿಸ್ವಾಮಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿಯವರು. ತಂದೆ ವಿರುಪಾಕ್ಷಯ್ಯ, ತಾಯಿ ಅನ್ನಪೂರ್ಣಮ್ಮ, ಎಂ.ಎ, ಬಿ.ಇಡಿ ಪದವೀಧರರು. 16 ಸ್ವತಂತ್ರ ಕೃತಿಗಳು, ತಮ್ಮ ಅನ್ನಪೂರ್ಣ ಪ್ರಕಾಶನದ ಮೂಲಕ  67 ಕೃತಿಗಳನ್ನು ಪ್ರಕಾಶಿಸಿದ್ದಾರೆ. 37 ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯಿಂದ (2017) ಇವರ ಪುಸ್ತಕಕ್ಕೆ ಬಹುಮಾನ ಲಭಿಸಿದೆ.  ಕೃತಿಗಳು: ಸ್ವರ ಗಂಧರ್ವ (ಸಂಪಾದನೆ), ಸಮ್ಮೇಳನಾಧ್ಯಕ್ಷರ ಭಾಷಣಗಳು (ಸಂಪಾದನೆ), ರಂಗಸಂಭ್ರಮ (ಅಂಕಣಗಳ ಬರಹ), ಬೆಟ್ಟದ ಹೂವು (ಸಂ), ದೊಡ್ಮನೆ ಅಮ್ಮ (ಸಂ), ಸ್ನೇಹಶೀಲ.  ...

READ MORE

Related Books