ನಮೋ ವೆಂಕಟೇಶ

Author : ರಘುನಾಥ ಚ ಹ

Pages 136

₹ 150.00




Year of Publication: 2020
Published by: ಅನ್ನಪೂರ್ಣ ಪ್ರಕಾಶನ
Address: ಸಿರಿಗೇರಿ-583120, ಸಿರಗುಪ್ಪ ತಾಲೂಕು, ಜಿಲ್ಲೆ ಬಳ್ಳಾರಿ.

Synopsys

ಚಲನಚಿತ್ರಗಳ ಕುರಿತು ಬರೆದ ಪ್ರಬಂಧಗಳ ಸಂಕಲನ-ನಮೋ ವೆಂಕಟೇಶ. ಪತ್ರಕರ್ತ ಚ.ಹ. ರಘುನಾಥ ಅವರ ಕೃತಿ ಇದು. ಶಾಪ ವಿಮೋಚನೆಯ ಹಂಬಲದಲ್ಲಿ ಅಭಿಜ್ಞಾನದ ಹುಡುಕಾಟ, ಬೆಟ್ಟ ಬಯಲು, ಒಲವು ಹೊನಲು, ಧನುರ್ಧಾರಿ ರಾಮಘೋಷದ ನಡುವೆ ಪ್ರೇಮಮೂರ್ತಿಯ..., ಗ್ರಾಮಭಾರತದ ಸಶಕ್ತ ಚಿತ್ರಪಟ, ಬಿಎಫ್ ಜಿ ಎನ್ನುವ ಹದಿನಾರಾಣೆ ಕೃಷಿಕ, ಬತ್ತಿದ ಕೆರೆಯಂಗಳದಲ್ಲಿ ಹಾಡು ಹಕ್ಕಿ, ಮಂಜುನಾಥ! ಮೇಡ್ ಇನ್ ಕನ್ನಡ, ಗಾಂಧಿ ಮಾರ್ಗದ ಒಳಗೂ ಹೊರಗೂ, ಅರೆ ಶತಮಾನದ ಮಹಾಮೌನ, ಮಾನವೀಯತೆ ಕಿಂದರಿ ಮಿಡಿವ ಕಿನ್ನರಿ ಹೀಗೆ ಒಟ್ಟು 20 ಪ್ರಬಂಧಗಳನ್ನು ಸಂಕಲಿಸಲಾಗಿದೆ.

ಟೆಂಟು-ಶೆಡ್ಡು ತಲೆಮಾರಿನ ಪ್ರೇಕ್ಷಕರ ಮನಸ್ಸಿನಲ್ಲಿ ಮಧುರ ಸ್ಮೃತಿಯಾಗಿ ಉಳಿದಿರುವ ‘ನಮೋ ವೆಂಕಟೇಶ’, ಕನ್ನಡ ಸಿನಿಮಾ ಸಂವೇದನೆಯ ಭಾಗವೂ ಆಗಿದೆ. ಆಯ್ದ ಕನ್ನಡ ಸಿನಿಮಾಗಳ ವಿಶ್ಲೇಷಣೆಯ ಪ್ರಯತ್ನದ ಇಲ್ಲಿನ ಬರಹಗಳು ಸಿನಿಮಾಗಳನ್ನು ಸಾಂಸ್ಕೃತಿಕ ಸಮಾಜಿಕ ಪಠ್ಯದ ರೂಪದಲ್ಲಿ ನೋಡುವ ರಸಸ್ವಾದದ ಪ್ರಯತ್ನಗಳಾಗಿವೆ ಎಂದು ಲೇಖಕರು ಹೇಳಿದ್ದಾರೆ. 

About the Author

ರಘುನಾಥ ಚ ಹ
(01 October 1974)

ರಘುನಾಥ ಚ.ಹ. ಅವರು ಜನಿಸಿದ್ದು 1974 ನವೆಂಬರ್ 1ರಂದು. ಇವರ ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಾಪುರದವರಾದ ಇವರು ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.  ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ (ಕಥೆಗಳು), ರಾಗಿಮುದ್ದೆ, (ಪ್ರಬಂಧ ಸಂಕಲನ), ಚೆಲ್ಲಾಪಿಲ್ಲಿ(ಲೇಖನಗಳು), ವ್ಯಂಗ್ಯಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ.ದೇವಿ ಶೆಟ್ಟಿ, ಬಿಲ್‌ಗೇಟ್ಸ್, ...

READ MORE

Related Books