ಸಂತ್ಯಾಗ ನಿಂತಾನ ಕಬೀರ

Author : ಗೋಪಾಲ ವಾಜಪೇಯಿ



Year of Publication: 2016
Published by: ಯಾಜಿ ಪ್ರಕಾಶನ
Address: ಉಮಾಮಹೇಶ್ವರ ಬಿಲ್ಡಿಂಗ್, ಸೀನಂಭಟ್ಟ ಕಚೇರಿ ಹತ್ತಿರ, ನಾಲ್ಕನೇ ವಾರ್ಡ್, ಪಟೇಲ ನಗರ, ಹೊಸಪೇಟೆ-583201, ಕರ್ನಾಟಕ
Phone: 9449922800

Synopsys

ಲೇಖಕ ಗೋಪಾಲ ವಾಜಪೇಯಿ ಅವರ ಕೃತಿ ʻಸಂತ್ಯಾಗ ನಿಂತಾನ ಕಬೀರʼ. ಶಿವರಾಜ್‌ ಕುಮಾರ್‌ ಹಾಗೂ ಮಲಯಾಳಂ ಚಿತ್ರ ನಟಿ ಸನುಶಾ ಸಂತೋಷ್ ಅಭಿನಯದ, ಕಬಡ್ಡಿ ಇಂದ್ರ ಬಾಬು ನಿರ್ದೇಶನದ ಚಿತ್ರ ʻಸಂತೆಯಲ್ಲಿ ನಿಂತ ಕಬೀರʼ. ಇದೇ ಚಿತ್ರದ ಗೀತರಚನೆಕಾರ ಗೋಪಾಲ ವಾಜಪೇಯಿ ಅವರು ಇದನ್ನು ಪುಸ್ತಕ ರೂಪಕ್ಕೆ ಅನುವಾದಮಾಡಿದ್ದಾರೆ. ಇದು ಭೀಷ್ಮ ಸಾಹ್ನಿ ಅವರ ಹಿಂದಿ ನಾಟಕ ʻಕಬೀರ್ ಖಡಾ ಬಾಜಾರ್ ಮೆʼ ಯನ್ನು ಆಧರಿಸಿದ್ದಾಗಿದೆ. 15ನೇ ಶತಮಾನದ ಅಧ್ಯಾತ್ಮಿಕ ಕವಿ ಕಬೀರ್ ಅವರ ಪಾತ್ರವನ್ನು ಶಿವರಾಜ್‌ ಕುಮಾರ್‌ ಅವರು ನಿರ್ವಹಿಸಿದ್ದಾರೆ. ಚಿತ್ರದ ಕತೆಯನ್ನು ಲೇಖಕರು ಇಲ್ಲಿ ಹೇಳಿದ್ದಾರೆ.

About the Author

ಗೋಪಾಲ ವಾಜಪೇಯಿ
(01 June 1951 - 20 September 2016)

ಪಂಪನ ಪುಲಿಗೆರೆಯಾದ ಲಕ್ಷೆಶ್ವರದಲ್ಲಿ (ಗದಗ ಜಿಲ್ಲೆ) ಜನಿಸಿದ ಗೊಪಾಲ ವಾಜಪೇಯಿ (1951) ಅವರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ, ರಂಗಭೂಮಿ ಹಾಗೂ ಜಾನಪದಗಳಲ್ಲಿ ಆಸಕ್ತಿ ಹೊಂದಿದ್ದರು. 'ಸಂಯುಕ್ತ ಕರ್ನಾಟಕ', 'ಕರ್ಮವೀರ' ಹಾಗೂ 'ಕಸ್ತೂರಿ' ಪತ್ರಿಕೆಗಳಲ್ಲಿ ಉಪಸಂಪಾದಕ ಸ್ಥಾನದಿಂದ ಸಂಪಾದಕ ಸ್ಥಾನದ ತನಕ ಮೂರು ದಶಕಗಳ ಸೇವೆ ಸಲ್ಲಿಸಿದ್ದರು. ಈ ಟೀವಿ ಕಥಾವಿಭಾಗದ ಸಂಯೋಜಕರಾಗಿ ಆರು ವರ್ಷಗಳ ಸೇವೆ ಸಲ್ಲಿಸಿದ ಅವರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದರು (1987-90). ಗೋಪಾಲ ವಾಜಪೇಯ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಗಳು ಪ್ರಶಸ್ತಿ ನೀಡಿ ...

READ MORE

Related Books