ಸ್ನೇಹಶೀಲ

Author : ಸಿರಿಗೇರಿ ಯರಿಸ್ವಾಮಿ

₹ 300.00




Year of Publication: 2018
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ ಸಿರಿಗೇರಿ ಯರಿಸ್ವಾಮಿ ಅವರು ಕನ್ನಡ ಚಲನಚಿತ್ರ ನಟ ಅಂಬರೀಶ್ ಅವರ ಕುರಿತು ಬರೆದ ಕೃತಿ-ಸ್ನೇಹಶೀಲ. ತ.ರಾ.ಸು ಕಾದಂಬರಿ-‘ನಾಗರಹಾವು’ ಮೂಲಕ ಕನ್ನಡ ಚಲನಚಿತ್ರರಂಗವನ್ನು ಪ್ರವೇಶಿಸಿದ ನಟ ಅಂಬರೀಶ ಅವರು ತಮ್ಮ ವಿಶಿಷ್ಟ ಹಾವಭಾವದೊಂದಿಗಿನ ನಟನೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದವರು. ಮಾತ್ರವಲ್ಲ; ಅಭಿಮಾನಿಗಳಿಂದ ‘ರೆಬೆಲ್ ಸ್ಟಾರ್’ ಎಂಬ ಖ್ಯಾತಿಗೆ ಪಾತ್ರರಾದರು. ಕನ್ವರ್ ಲಾಲ್ ಪಾತ್ರ ‘ಅಂತ’ ಕನ್ನಡ ಚಲನಚಿತ್ರವು ಇವರಿಗೆ ಭರ್ಜರಿ ಹೆಸರು ತಂದು ಕೊಟ್ಟಿತು. ಉದಯೋನ್ಮುಖ ಕಲಾವಿದರಿಗೆ ಪೋಷಕರೂ ಆಗಿದ್ದ ಅಂಬರೀಶ, ನಾಯಕ ನಟನಾಗಿ, ಗೌರವಪಾತ್ರವಾಗಿ..ಹೀಗೆ ಯಾವುದೇ ಪಾತ್ರವಿರಲಿ, ಅದಕ್ಕೆ ತಮ್ಮ ನಟನಾ ಕಲೆಯ ಮೂಲಕ ನ್ಯಾಯ ಸಲ್ಲಿಸಿದವರು. ಈ ನಟನ ಕಲಾ ಸಾಧನೆ ಕುರಿತು ವಿವರಿಸಿದ ಕೃತಿ ಇದು.

About the Author

ಸಿರಿಗೇರಿ ಯರಿಸ್ವಾಮಿ

ಲೇಖಕ ಸಿರಿಗೇರಿ ಯರಿಸ್ವಾಮಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿಯವರು. ತಂದೆ ವಿರುಪಾಕ್ಷಯ್ಯ, ತಾಯಿ ಅನ್ನಪೂರ್ಣಮ್ಮ, ಎಂ.ಎ, ಬಿ.ಇಡಿ ಪದವೀಧರರು. 16 ಸ್ವತಂತ್ರ ಕೃತಿಗಳು, ತಮ್ಮ ಅನ್ನಪೂರ್ಣ ಪ್ರಕಾಶನದ ಮೂಲಕ  67 ಕೃತಿಗಳನ್ನು ಪ್ರಕಾಶಿಸಿದ್ದಾರೆ. 37 ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯಿಂದ (2017) ಇವರ ಪುಸ್ತಕಕ್ಕೆ ಬಹುಮಾನ ಲಭಿಸಿದೆ.  ಕೃತಿಗಳು: ಸ್ವರ ಗಂಧರ್ವ (ಸಂಪಾದನೆ), ಸಮ್ಮೇಳನಾಧ್ಯಕ್ಷರ ಭಾಷಣಗಳು (ಸಂಪಾದನೆ), ರಂಗಸಂಭ್ರಮ (ಅಂಕಣಗಳ ಬರಹ), ಬೆಟ್ಟದ ಹೂವು (ಸಂ), ದೊಡ್ಮನೆ ಅಮ್ಮ (ಸಂ), ಸ್ನೇಹಶೀಲ.  ...

READ MORE

Related Books