ನೆನಪಿನ ಮುತ್ತಿನಹಾರ

Author : ಎಸ್. ವಿ. ರಾಜೇಂದ್ರಸಿಂಗ್ ಬಾಬು

Pages 380

₹ 350.00




Year of Publication: 2016
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಕನ್ನಡ ಚಲನಚಿತ್ರರಂಗದ ನಿರ್ದೇಶಕರಾದ ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರು ಬರೆದಿರುವ ಪುಸ್ತಕ ’ನೆನಪಿನ ಮುತ್ತಿನಹಾರ’.

ಈ ಪುಸ್ತಕವು ಕನ್ನಡ ಚಿತ್ರರಂಗದ ಧೀಮಂತ ಮೇರುನಟ ಡಾ. ವಿಷ್ಣುವರ್ಧನ್ ಅವರ ಬಗೆಗಿನ ನೆನಪುಗಳನ್ನು ಈ ಕೃತಿ ಬಿತ್ತರಿಸಿದೆ.

ಸ್ನೇಹದ ಮೊದಲ ದಿನಗಳು, ಮೇಕಪ್ ಟೆಸ್ಟ್ ನಲ್ಲಿ ಗೆದ್ದ ವಿಷ್ಣು, ಸುತ್ತಾಟ ತಂದ ಪೀಕಲಾಟ, ಜನಪ್ರಿಯ ಹಾಡಿನ ಸಾಲೇ ಮುಳುವಾದಾಗ, ಕಾಲ್ ಷೀಟ್ ಹಾಗೂ ಕಾರಿನ ಪ್ರಯಾಣ, ಏರ್‍ ಗನ್ ಚೇಷ್ಟೆ, ಮುತ್ತತ್ತಿಯಲ್ಲಿ ಆನೆಗಳ ಮುತ್ತಿಗೆ, ಕೂಗಾಡಿ ಕಷ್ಟಕ್ಕೆ ಸಿಲುಕಿದ್ದು, ಎಂ.ಜಿ.ಆರ್‍, ವಿಷ್ಣುವಿನಿಂದ ಸಾಧ್ಯವಾದ ನಾಗರಹೊಳೆ, ವಿಷ್ಣು ಮದುವೆಯಲ್ಲಿ ನಾವು, ಎಳನೀರು ಬುರುಡೆಯಲ್ಲಿ ಟೀ, ರವಿ ಕಥೆಗೆ ವಿಷ್ಣುವನ್ನು ನಾಯಕ ಮಾಡಲು ಹೆಣಗಾಡಿದ್ದು, ಕುದುರೆ ಲಾಯದಲ್ಲಿ ಕೂಲಿ ವಿಷ್ಣು, ವಿಷ್ಣು ನಕಾರ,  ಶಂಕರ್‍ ಸ್ವೀಕಾರ, ನಗೆ ಉಕ್ಕಿಸಿದ ಟ.ಎನ್.ಆರ್‍ ಇಂಗ್ಲಿಷ್, ಗೋವಾದಲ್ಲಿ ಕ್ಯಾಬರೆ ಮೋಹ, ನಾನು ಕಂಡ ಕಳ್ಳ ಕುಳ್ಳ, ಮಾನಸ ಸರೋವರವೂ ಜಾತಕ ಪ್ರೀತಿಯೂ, ನನಸಾಗದ ಹಗಲುಗನಸು, ಮುತ್ತಿನಹಾರದ ಕಥನ ಕುತೂಹಲ, ಮಡಿಕೇರಿಯಲ್ಲಿ ಸಿಕ್ಕ ಹಾಡು, ಶಮ್ಮಿ ಕಪೂರ್‍ ಗೆ ವಿಷ್ಣು ಆತಿಥ್ಯ, ಹೀಗೆ ಅನೇಕ ಲೇಖನಗಳು ಕನ್ನಡ ಚಿತ್ರರಂಗದಲ್ಲಿ ಮೆರೆದ, ನೆನಪಿಸಿದ ವಿಷ್ಣುವರ್ಧನ್ ಜೊತೆಗಿನ ದಿನಗಳನ್ನು ಇಲ್ಲಿ ಚಿತ್ರಿಸಿದ್ದಾರೆ.

About the Author

ಎಸ್. ವಿ. ರಾಜೇಂದ್ರಸಿಂಗ್ ಬಾಬು
(22 October 1952)

  ಕನ್ನಡ ಚಲನಚಿತ್ರ ರಂಗದ ಪ್ರಸಿದ್ಧ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ’ಪ್ರಜಾವಾಣಿ’ಯಲ್ಲಿ ಅಂಕಣ ರೂಪದಲ್ಲಿ ಬರೆದು ಪ್ರಕಟಿಸಿದ್ದರು. ಅವರ ’ ನೂರೊಂದು ನೆನಪು’ ಪುಸ್ತಕವಾಗಿ ಪ್ರಕಟವಾಗಿದೆ. ಕರ್ನಾಟಕ  ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.    ರಾಜೇಂದ್ರಸಿಂಗ್‌ ಬಾಬು ಅವರು ಜನಿಸಿದ್ದು 1952 ಅಕ್ಟೋಬರ್ 22ರಂದು ತಂದೆ ಹೆಸರಾಂತ ನಿರ್ಮಾಪಕ ಎಸ್. ವಿ. ಶಂಕರಸಿಂಗ್, ತಾಯಿ ನಟಿ ಪ್ರತಿಮಾದೇವಿ. ಶಂಕರ್ ಸಿಂಗ್ ಅವರ ಗೆಳೆಯ ಬಿ. ವಿಠ್ಠಲಾಚಾರ್ಯ ಅವರು ಆರಂಭಿಸಿದ ‘ಮಹಾತ್ಮ ಪಿಕ್ಚರ್ಸ್’ (1946) ರಾಜೇಂದ್ರಸಿಂಗ್ ನೇತೃತ್ವದಲ್ಲಿ ಮುನ್ನಡೆದಿದೆ. ...

READ MORE

Related Books