ಎದ್ದೇಳು ಮಂಜುನಾಥ ಕಥೆ-ಚಿತ್ರಕಥೆ

Author : ಗುರುಪ್ರಸಾದ್‌

Pages 146

₹ 125.00




Year of Publication: 2012
Published by: ಟೋಟಲ್‌ ಕನ್ನಡ
Address: ಜಯನಗರ, ನಾಲ್ಕನೇ ಬ್ಲಾಕ್‌, ಪವಿತ್ರ ಪ್ಯಾರಡೈಸ್‌ ಹತ್ತಿರ, ಬೆಂಗಳೂರು

Synopsys

ಚಿತ್ರನಿರ್ದೇಶಕ ಗುರುಪ್ರಸಾದ್‌ ಅವರು ಯಶಸ್ವಿ ಚಲನಚಿತ್ರ ’ಎದ್ದೇಳು ಮಂಜುನಾಥ’ ಚಿತ್ರದ ಕತೆ-ಚಿತ್ರಕತೆಯನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಜಗ್ಗೇಶ್‌ ನಾಯಕನಾಗಿದ್ದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮಾತ್ರವಲ್ಲದೆ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ವಿಭಿನ್ನ ನಿರೂಪಣೆ, ಲವಲವಿಕೆಯ ಕತೆ ಹೇಳುವಿಕೆಯ ಕಾರಣಕ್ಕಾಗಿ ಚಿತ್ರ ರಸಿಕರು ಮೆಚ್ಚಿಕೊಂಡಿದ್ದರು. ’ಎದ್ದೇಳು ಮಂಜುನಾಥ’ದ ಚಿತ್ರಕಥೆಯ ಪುಸ್ತಕವು ಸಿನಿಮಾ ಸಾಹಿತ್ಯದಲ್ಲಿ ಆಸಕ್ತರಾಗಿರುವವರಿಗೆ ಪ್ರಿಯವಾಗುತ್ತದೆ.

About the Author

ಗುರುಪ್ರಸಾದ್‌

ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುಪ್ರಸಾದ್ ಅವರು ಉತ್ತಮ ಸಾಹಿತಿ, ಚಿತ್ರ ಸಾಹಿತಿಯೂ ಹೌದು. ಇವರು 1972 ನವೆಂಬರ್‌ 02ರಂದು ಕನಕಪುರದಲ್ಲಿ ಜನಿಸಿದರು. ನವಿರು, ಸೂಕ್ಷ್ಮ ವ್ಯಂಗ್ಯಗಳ ಮೂಲಕ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ನಿರ್ದೇಶನದಲ್ಲಿ ಇವರು ಸಿದ್ಧಹಸ್ತರು. 2006ರಲ್ಲಿ ತೆರೆಕಂಡ `ಮಠ' ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿ ಪಯಣ ಆರಂಭಿಸಿದರು. ಇವರ ‘ಎದ್ದೇಳು ಮಂಜುನಾಥ’ ಪುಸ್ತಕವು ಸಿನಿಮಾ ಸಾಹಿತ್ಯಕ್ಕೆ ಒಗ್ಗಿದ್ದು ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುತ್ತವೆ. ನಂತರ ಇದೇ ಶೀರ್ಷಿಕೆಯಲ್ಲಿ ಚಿತ್ರಿಸಿದ `ಎದ್ದೇಳು ಮಂಜುನಾಥ' ತನ್ನ ವಿಭಿನ್ನ ನಿರೂಪಣೆ, ಲವಲವಿಕೆಯ ಕತೆ ಹೇಳುವಿಕೆಯ ...

READ MORE

Related Books