ಗುರುವೇ ಅರಿವಾದಾಗ

Author : ಎನ್.ಎಸ್. ಶ್ರೀಧರಮೂರ್ತಿ

Pages 52

₹ 30.00




Year of Publication: 2004
Published by: ಇಳಾ ಮುದ್ರಣ
Address: ನಂ. 36, 40 ಅಡಿ ರಸ್ತೆ, ರಾಘವನಗರ, ನ್ಯೂ ಟಿಂಬರ್ ಯಾರ್ಡ್ ಲೇಔಟ್, ಬೆಂಗಳೂರು- 26
Phone: 6757159

Synopsys

‘ಗುರುವೇ ಅರಿವಾದಾಗ’ ಲೇಖನ ಎನ್.ಎಸ್. ಶ್ರೀಧರಮೂರ್ತಿ ಅವರ ಕೃತಿ. ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಜೀವನ-ಬೋಧನೆ ದಾಖಲಿಸಲಾಗಿದೆ. ವಿದ್ವಾನ್ ಎನ್. ರಂಗನಾಥಶರ್ಮ ಅವರು ಕೃತಿಗೆ ಬೆನ್ನುಡಿ ಬರೆದು ‘ಶ್ರೀ ಶಂಕರಭಗವಾತ್ಪಾದರಿಂದ ಈಚೆಗೆ ಸಹ ಬ್ರಹ್ಮ ಜ್ಞಾನಿಗಳೂ ಜೀವನ್ಮುಕ್ತರೂ ಆದ ಎಷ್ಟೋ ಮಹಾತ್ಮರು ಈ ಭರತಭೂಮಿಯಲ್ಲಿ ಆಗಿ ಹೋಗಿದ್ದಾರೆ. ಕೆಲವರು ಇತಿಹಾಸ ಪ್ರಸಿದ್ಧರು, ಇನ್ನು ಕೆಲವರು ನಮಗೆ ಅತ್ಯಂತ ಸಮೀಪ ಕಾಲದಲ್ಲಿದ್ದವರು. ಅಂತಹವರಲ್ಲೊಬ್ಬರಾದ ಸದ್ಗುರು ಶ್ರೀ ಶಂಕರಲಿಂಗ ಭಗವಾನರ ಜೀವನ ಮತ್ತು ವಿಚಾರಗಳು. ಈ ಪುಸ್ತಕದಲ್ಲಿ ಸಂಕ್ಷೇಪವಾಗಿ ಹಾಗೇ ತಲಸ್ಪರ್ಶಿಯಾಗಿ ಬಂದಿವೆ. ಆದರ್ಶ ಮಹಾಪುರುಷರೊಬ್ಬರ ಚಿತ್ರಣ ಕಣ್ಣಿಗೆ ಕಟ್ಟುವಂತಿದ್ದು, ಇಂಥ ಬ್ರಹ್ಮಜ್ಞಾನಿಗಳು ರಾಷ್ಟ್ರದ ಸಂಪತ್ತು, ವಿಶ್ವದ ಸಂಪತ್ತು ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಎನ್.ಎಸ್. ಶ್ರೀಧರಮೂರ್ತಿ
(24 August 1968)

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...

READ MORE

Related Books