ಶ್ರೀ ಮಹಾಭಾರತ ಪಾತ್ರ ಪ್ರಪಂಚ

Author : ಕೆ.ಎಸ್‍. ನಾರಾಯಣಾಚಾರ್ಯ

Pages 352

₹ 517.00

Buy Now


Year of Publication: 2012
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 0836-2367676

Synopsys

ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ -ಶ್ರೀ ಮಹಾಭಾರತದ ಪಾತ್ರ ಪ್ರಪಂಚ. ಈ ಮಹಾಕಾವ್ಯದಲ್ಲಿಯ ಪ್ರತಿಪಾತ್ರವೂ ಒಂದೊಂದು ವಿಶಿಷ್ಟ ಗುಣಗಳಿಂದ ಕೂಡಿದೆ. ಅದು ಜೀವನದ ಯಾವುದೇ ಸನ್ನಿವೇಶದಲ್ಲಿ ಅದರ ಪ್ರಾಮುಖ್ಯತೆ ತಿಳಿಯಬಹುದು. ಈ ಕಾರ್ಯ ಸಾಧನೆಗಾಗಿಯೇ ಎಂಬಂತೆ ಮಹಾಕಾವ್ಯದಲ್ಲಿ ಪಾತ್ರ ಸೃಷ್ಟಿಯಾಗಿವೆ ಎಂಬುದೂ ಸಹ ಕುತೂಹಲಕರ ಸಂಗತಿ. ಮಹಾಭಾರತದಲ್ಲಿ ಪಾತ್ರಗಳ ಸಂಖ್ಯೆ ಅಗಣಿತ. ಆದರೂ, ಲೇಖಕರು ಇಲ್ಲಿಯ ಪಾತ್ರಗಳ ವೈಶಿಷ್ಟ್ಯತೆಯನ್ನು ತೋರಲು ಯತ್ನಿಸಿದ್ದು ಸ್ಪಷ್ಟ.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books