ಪೂರ್ವರಂಗ

Author : ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)

Pages 131

₹ 0.00




Year of Publication: 1932
Published by: ಜಯ ಕರ್ನಾಟಕ ಗ್ರಂಥಮಾಲೆ
Address: ಸಾಧನಕೇರಿ, ಧಾರವಾಡ

Synopsys

ಪೂರ್ವರಂಗ-ಕವಿ ಮಧುರಚೆನ್ನ ಅವರು ಹೇಳುವಂತೆ ಈ ಕೃತಿಯು ಒಂದು ಅಧ್ಯಾತ್ಮಿಕ ಕಥೆ. ಒಂದರ್ಥದಲ್ಲಿ ಕವಿಯ ಸಾಧನೆಯ ಆತ್ಮಕಥೆಯೂ ಆಗಿದೆ. ಕೃತಿಯಲ್ಲಿ ಎರಡು ಭಾಗಗಳಲ್ಲಿ ವಿಚಾರಗಳನ್ನು ಮಂಡಿಸಲಾಗಿದೆ. ಒಂದು ವೈಷಮ್ಯ ಖಂಡ, ಮತ್ತೊಂದು ಸಮನ್ವಯ ಖಂಡ. ವೈಷಮ್ಯ ಖಂಡದಲ್ಲಿ ರಾಜಸಬುದ್ಧಿಗೆ ತಕ್ಕಂತೆ ವಿಚಾರಗಳು ವಿಷಮವಾಗಿವೆ. ಆ ಕಾಲಕ್ಕೆ ಈ ವಿಚಾರಗಳು ಹೇಗೆ ವ್ಯಕ್ತವಾದವೋ ಅದೇ ರೀತಿಯಲ್ಲಿ ವ್ಯಕ್ತ ಮಾಡಲಾಗಿದೆ. ಸಮನ್ಮಯ ಖಂಡದಲ್ಲಿ, ಈ ವಿಷಮ ವಿಚಾರಗಳ ಸಮನ್ವಯವಿಲ್ಲ. ಆದರೆ, ಮನದ ವೈಷಮ್ಯವು ಶಾಂತಿಯ ಸಮತೆಯಲ್ಲಿ ಹೇಗೆ ಬಾಯಿಗೂಡಿತು ಎಂಬುದನ್ನು ಹೇಳಲಾಗಿದೆ.

ಸಂಶಯವನ್ನೂ,, ವೈಷಮ್ಯವನ್ನೂ,  ಅತೃಪ್ತಿಯನ್ನು ಹೇಗೆ ಉಂಟು ಮಾಡುತ್ತವೆ ಎಂಬ ಬಗ್ಗೆ ವಾಸ್ತವದ ದರ್ಶನವು ವೈಷಮ್ಯ ಖಂಡದಲ್ಲಿದ್ದರೆ , ಸಾತ್ವಿಕ ಜೀವನ ದರ್ಶನವು ಸಮನ್ವಯ ಖಂಡದಲ್ಲಿದೆ.

ವೈಷಮ್ಯ ಖಂಡದಲ್ಲಿ ಗುರುಪೂಜೆ, ಮೂರ್ತಿಪೂಜೆ, ವೈರಭಕ್ತಿಯ ಶೀಘ್ರ ಫಲ, ಘೋರ ಸಾಹಸ, ಕಲ್ಪನಾತೀತ, ಸತ್ಸಂಗ ಹಾಗೂ ಶಾಸ್ತ್ರಜಾಲ ಶೀರ್ಷಿಕೆಯಡಿ ವಿಚಾರಗಳಿದ್ದರೆ, ಸಮನ್ವಯ ಖಂಡದಲ್ಲಿ ಭ್ರಮಶೋಧನ, ಮತ್ತೆ ಮತ್ತೆ ಊಟ ಮತ್ತೆ ಮತ್ತೆ ಹಸಿವು, ಸಾಧನೆ ಪ್ರಯತ್ನ, ಪ್ರಥಮ ಪರಿಚಯ, ಜೀವನ ಸಾಮರಸ್ಯ, ರೌದ್ರಕರುಣೆ, ಪ್ರಗಾಢಸ್ಪರ್ಶ ಶೀರ್ಷಿಕೆಗಳಡಿ ವಿಚಾರ ಮಂಡಿಸಲಾಗಿದೆ.

About the Author

ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)
(31 July 1903 - 15 August 1952)

ಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು  ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. ಹಲಸಂಗಿಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮಧುರಚೆನ್ನರು, ಹಲಸಂಗಿ ಗೆಳೆಯರೆಂದೇ ಪ್ರಖ್ಯಾತಿ. ಬಿಜಾಪುರಕ್ಕೆ ಹೋಗಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಇಂಗ್ಲಿಷ್, ಸಂಸ್ಕೃತ, ಹಳಗನ್ನಡ ಕಲಿತರು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಇತ್ಯಾದಿ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳು. 12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ...

READ MORE

Related Books