ಸಂಸ್ಕಾರಗಳು : ಪರಮಾರ್ಥ ಮತ್ತು ಪ್ರಸ್ತುತಾನ್ವಯ

Author : ಶತಾವಧಾನಿ ಆರ್. ಗಣೇಶ

Pages 167

₹ 150.00




Year of Publication: 2021
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ವಿದ್ವಾಂಸ ಡಾ. ಶತಾವಧಾನಿ ಆರ್. ಗಣೇಶ ಅವರ ಕೃತಿ-ಸಂಸ್ಕಾರಗಳು. ಪರಮಾರ್ಥದಲ್ಲಿ ಹಾಗೂ ಪ್ರಸ್ತುತ ಸ್ಥಿತಿಗೆ ಅನ್ವಯವಾಗುವ ಹಾಗೆ ಸಂಸ್ಕಾರ ಕುರಿತ ಚಿಂತನೆಗಳನ್ನು ಚರ್ಚಿಸಿದ್ದು ಈ ಕೃತಿಯ ವೈಶಿಷ್ಟ್ಯ. ಯಾವುದೇ ಒಂದು ಪರಿಕಲ್ಪನೆಯ ‘ಇದು ಪರಮಾರ್ಥಕ್ಕೆ ಸೇರಿದ್ದು; ಇದು ಪ್ರಸ್ತುತ ಸಮಾಜಕ್ಕೆ ಅನ್ವಯಿಸಿದ್ದು’ ಎಂದೆಲ್ಲ ಮಾತನಾಡುತ್ತೇವೆ. ಆದರೆ, ಈ ರೀತಿಯ ತಿಳಿವಳಿಕೆ ನಮ್ಮ ಅಜ್ಞಾನದ ಸೂಚಕ. ಪ್ರಸ್ತುತ ಬದುಕಿನ ಆದರ್ಶ-ಮೌಲ್ಯಯುತವಾಗಿರುವುದು ಪರಮಾರ್ಥಕ್ಕೂ ಅನ್ವಯವಾಗುತ್ತವೆ. ಆದರೆ, ಇಲ್ಲಿ ಸಲ್ಲುವುದು ಅಲ್ಲಿಯೂ ಸಲ್ಲುತ್ತದೆ. ಆದರೆ, ಇಲ್ಲಿ ಸಲ್ಲದಿರುವುದು ಅಲ್ಲಿಯೂ ತಿರಸ್ಕಾರಕ್ಕೆ ಒಳಗಾಗುತ್ತದೆ.  ಈ ಕುರಿತ ಆಳ ಚಿಂತನೆಗಳು ಓದುಗರ ಜ್ಞಾನ ವಿಸ್ತಾರವನ್ನು ಹೆಚ್ಚಿಸುತ್ತವೆ.

About the Author

ಶತಾವಧಾನಿ ಆರ್. ಗಣೇಶ
(04 December 1962)

ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ. ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಯ ಪುತ್ರರು.04-12-1962ರಂದು ಕೋಲಾರದಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವೀಧರರು. ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ...

READ MORE

Related Books