ಸ್ಪೂರ್ತಿ ರಾಮಾಯಣ-2: ಅಯೋಧ್ಯಾಕಾಂಡ

Author : ಜಗದೀಶಶರ್ಮಾ ಸಂಪ

Pages 108

₹ 150.00




Year of Publication: 2024
Published by: ಸ್ವಪ್ನ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560 004\n
Phone: 9036312786

Synopsys

ಸ್ಪೂರ್ತಿ ರಾಮಾಯಣ-2 ‘ಅಯೋಧ್ಯಾಕಾಂಡ’ ಜಗದೀಶಶರ್ಮಾ ಸಂಪ ಅವರ ಕೃತಿ ಇದಾಗಿದ್ದು, ಈ ಕೃತಿಯ ಕುರಿತು ಬರೆಯುತ್ತಾ; 'ರಾಮಾಯಣದ ಸ್ಫೂರ್ತಿಯ ಗಂಗಾಧಾರೆ ಅಯೋಧ್ಯಾಕಾಂಡದಲ್ಲಿ ತುಂಬಿ ಹರಿದಿದೆ. ಇದು ಭಾವಸ್ಫೂರ್ತಿಯ ಪ್ರವಾಹ. ಮನುಷ್ಯನ ಮನೋಭಿತ್ತಿಯ ವಿವಿಧ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಚಿತ್ತದ ಅವಸ್ಥಾಂತರಗಳಿವೆ ಇಲ್ಲಿ. ಭಾವವೇ ಬದುಕೂ ಸಾವೂ ಆಗುವ ವೈಚಿತ್ರ್ಯವಿದೆ. ರಾಮಾಯಣ ರಾಮಾಯಣವಾಗಲು ತೊಡಗುವುದು ಇಲ್ಲಿ. ಹಾಗಾಗಿ ಇದನ್ನು ರಾಮಾಯಣದ ಸ್ಫೂರ್ತಿ ಎನ್ನಲೇನೂ ಅಡ್ಡಿಯಿಲ್ಲ.

ಕವಿ ವಾಲ್ಮೀಕಿ ಆ ರಸಘಟ್ಟಗಳನ್ನು ರಸಮಯವಾಗಿಯೇ ಚಿತ್ರಿಸಿದ್ದಾರೆ. ರಾಮಾಯಣ ಕರುಣರಸದ ಆಕರ ಎನ್ನುವ ಮಾತಿದೆ. ಅದಕ್ಕೆ ಅಯೋಧ್ಯಾಕಾಂಡವೇ ಭಿತ್ತಿ. ಕುಟುಂಬ ಮತ್ತು ಸಮೂಹದ ಪ್ರೀತಿ - ಅಪ್ರೀತಿಗಳ ಚಿತ್ರಣ ಅಯೋಧ್ಯಾಕಾಂಡದ್ದು. ಅದು ಹೇಗೆ ಬದುಕಿನ ಸ್ಫೂರ್ತಿಯಾಗುತ್ತದೆ ಎನ್ನುವುದನ್ನು ಹೇಳಲು ಈ ಕೃತಿ ಹೊರಟಿದೆ' ಎಂದಿದ್ದಾರೆ.

About the Author

ಜಗದೀಶಶರ್ಮಾ ಸಂಪ

ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ.  ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...

READ MORE

Related Books