ಶ್ರೀಮದ್ರಾಮಾಯಣದ ಮಹಾವಾಕ್ಯಗಳು

Author : ಕೆ.ಎಸ್‍. ನಾರಾಯಣಾಚಾರ್ಯ

Pages 104

₹ 72.00

Buy Now


Year of Publication: 2015
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 08362367676

Synopsys

ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ರಚಿಸಿದ ಕೃತಿ-ಶ್ರೀಮದ್ರಾಮಾಯಣದ ಮಹಾವಾಕ್ಯಗಳು. ರಾಮಾಯಣವು ಜೀವನ ಆದರ್ಶಗಳನ್ನು ಹೇಳುತ್ತದೆ. ಮಹಾಭಾರತವು ಜೀವನದ ವಾಸ್ತವತೆಯ ದರ್ಶನ ಮಾಡಿಸುತ್ತದೆ. ರಾಮಾಯಣದಲ್ಲಿ ಆದರ್ಶವೇ ಇದ್ದು, ಮೇಲ್ನೋಟಕ್ಕೆ ವಾಸ್ತವಕ್ಕೆ ಹೊಂದಿಕೆಯಾಗಲಾರವು ಎಂದೆನಿಸುತ್ತವೆ. ಆದರೆ, ಜೀವನದ ಸುದೀರ್ಘ ಕಾಲದವರೆಗೆ ಆದರ್ಶಗಳ ಪಾಲನೆಯು ಇವುಗಳ ಅಗತ್ಯವನ್ನು ಹಾಗೂ ರಾಮಾಯಣದಲ್ಲಿ ಆದರ್ಶಗಳ ಮಹತ್ವವನ್ನು ತಿಳಿಸುತ್ತವೆ. ಜೀವನ ಸಾರ್ಥಕತೆಗೆ ಈ ಆದರ್ಶಗಳು ಮೂಲ ಕಾರಣವಾಗಿವೆ ಎಂಬ ಅಂತಿಮ ಸತ್ಯ ಅರಿವಿಗೆ ಬರುತ್ತದೆ. ಈ ನಿಟ್ಟಿನಲ್ಲಿ ತುಂಬಾ ಪರಿಣಾಮಕಾರಿಯಾದ ಗ್ರಂಥವಿದು.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books