ಸ್ಪಷ್ಟತೆ

Author : ಸ್ವಾಮಿ ಸುಖಬೋಧಾನಂದ

Pages 170

₹ 180.00




Year of Publication: 2010
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರ ಕೃತಿ-ಸಷ್ಟತೆ. ಜೀವನದಲ್ಲಿ ಪ್ರತಿ ವ್ಯಕ್ತಿಯೂ ಒಬ್ಬನಮೇ ಇರುವುದಿಲ್ಲ. ಅವನೊಂದಿಗೆ ಆತನ ಅಂತರ್ಮುಖವೊಂದು ಇರುತ್ತದೆ. ಇದು ಸದಾ ಮಾರ್ಗದರ್ಶಿಯಾಗಿರುತ್ತದೆ. ಅದರ ಮಾತನ್ನು ಕೇಳಬೇಕು. ಸ್ಪಂದಿಸಬೇಕು. ಅದು ಜೀವನ ಪ್ರೀತಿಯಾಗಿಯೂ , ಜೀವನ ಪ್ರೇರಣೆಯಾಗಿಯೂ ಕೆಲಸ ಮಾಡುತ್ತದೆ. ಈ ಬಗ್ಗೆ ವ್ಯಕ್ತಿಗೆ ಸ್ಪಷ್ಟತೆ ಇರಬೇಕು. ಯಾವುದೇ ಗೊಂದಲಗಳಿರಬಾರದು. ಅಂತಹ ವ್ಯಕ್ತಿಯ ಅಭಿವೃದ್ಧಿ ಸುಗಮವಾಗಿರುತ್ತದೆ. ಈ ಸ್ಪಷ್ಟತೆ ಇರದಿದ್ದರೆ ಆತ ಏಳ್ಗೆ ಹೊಂದಲಾರ. ಇದನ್ನು ಅರ್ಥ ಮಾಡಿಕೊಳ್ಳುವ ಶಿಕ್ಷಣ ಆತನಿಗಿದ್ದರೆ ಮಾತ್ರ ಆತನ ಪ್ರಗತಿ, ಅತನಿಂದ ಸುತ್ತಲಿನ ಪ್ರದೇಶದ -ಜನರ ಅಭಿವೃದ್ಧಿಯೂ ಆಗಿ ಆತ ಮತ್ತೊಬ್ಬರಿಗೆ ಮಾದರಿಯೂ ಆಗುತ್ತಾನೆ ಎಂಬ ಎಚ್ಚರಿಕೆಯ ಸಂದೇಶ ಒಳಗೊಂಡಿದೆ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books