ಅಂತಃಕರಣದ ರಾಯಭಾರಿಗಳು

Author : ಸಿ.ಬಿ.ಶೈಲಾ ಜಯಕುಮಾರ್

Pages 120

₹ 120.00




Year of Publication: 2021
Published by: ಎಚ್.ಎಸ್.ಆರ್ ಎ ಪ್ರಕಾಶನ
Address: # 2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯ ರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು- 5600058
Phone: 7892793054

Synopsys

ಮಾನವೀಯ ಮೌಲ್ಯಗಳು, ಮತ್ತೊಬ್ಬರ ಭಾವನೆಗೆ ಮಿಡಿಯುವ, ಕಷ್ಟಕ್ಕೆ ತುಡಿಯುವ ನಿಸ್ವಾರ್ಥ ಮನೋಭಾವ, ಮತ್ತೊಬ್ಬರ ಏಳೆಗೆ ಸಂತೋಷಿಸುವ ಗುಣ ಮರೆಯಾಗುತ್ತಿರುವ ಇಂತಹ ಹೊತ್ತಿನಲ್ಲಿ ಹಲವಾರು ಮಹನೀಯರ, ಮೇರು ವ್ಯಕ್ತಿಗಳ ಅಂತಃಕರಣವನ್ನು, ಸಮುದ್ರದಲ್ಲಿ ಮುತ್ತನ್ನು ಹೆಕ್ಕಿ ತರುವಂತಹ ಅವರ ಸಮಗ್ರ ಜೀವನದಲ್ಲಿ ಯಾವುದೋ ಒಂದು ಪರಿಸ್ಥಿತಿಗೆ, ಘಟನೆಗೆ ಅವರು ಸ್ಪಂದಿಸಿದ ರೀತಿಯಲ್ಲಿಯೇ ಅವರ ಇಡೀ ವ್ಯಕ್ತಿತ್ವದ ಅನಾವರಣವಾಗುವಂತೆ ಲೇಖಕಿ ಆರಿಸಿಕೊಂಡ ಘಟನೆಗಳು ಓದುಗರ ಮನವನ್ನು ಕಲಕಿ ಅಂತರಂಗದಲ್ಲಿಯೇ ಉಳಿದುಬಿಡುತ್ತವೆ. ಕೆಲವನ್ನು ಓದುವಾಗ ಒಂದೆರಡು ಹನಿ ಕಣ್ಣೀರು, ಆನಂದಭಾಷ್ಪ ನಮಗರಿವಿಲ್ಲದೆ ಉದುರಿ ಬಿಡುತ್ತವೆ. ಇಲ್ಲಿನ ರಾಯಭಾರಿಗಳು ಒಂದೇ ವೃತ್ತಿ ಅಥವಾ ವರ್ಗಕ್ಕೆ ಸೇರಿದವರಲ್ಲ, ಸಾಹಿತಿಗಳು, ಗಾಯಕರು, ನಟರು, ರಾಜಕಾರಣಿಗಳು, ವಾಸ್ತುಶಿಲ್ಪಿಗಳು, ಸಮಾಜಸೇವಕರು, ಸಾಧಕರು, ದಾಸರು, ವೈದ್ಯರು, ಶರಣರು, ಉದಾತ್ತ ಜೀವಗಳನ್ನು ಧರೆಗೆ ತಂದ ಹೆತ್ತೊಡಲುಗಳು. ಹೀಗೆ ಅವರ ವೃತ್ತಿ, ಪ್ರವೃತ್ತಿಗಳು ಯಾವುದೇ ಆಗಿದ್ದರೂ ಅವರು ಮೊದಲು ಮಾನವರಾಗಿದ್ದರು. ಅಂತಃಕರಣದ ಸೆಲೆಯಾಗಿದ್ದರು ಎಂಬುದನ್ನು ಈ ಬರಹಗಳು ತೋರಿಸುತ್ತವೆ. ಆತ್ಮ ವಿಮರ್ಶೆಗೆ, ಆತ್ಮ ವಿಕಾಸಕ್ಕೆ ಮಾರ್ಗದರ್ಶನ ಮಾಡುವ ಈ ಲೇಖನಗಳ ವಾಚನ ಸತ್ಪಥಕ್ಕೆ ದಾರಿಯಾದರೆ ಲೇಖಕಿಯ ಶ್ರಮ ಸಾರ್ಥಕ.

About the Author

ಸಿ.ಬಿ.ಶೈಲಾ ಜಯಕುಮಾರ್

ಸಿ.ಬಿ.ಶೈಲಾ ಜಯಕುಮಾರ್ ಅವರು ಮೂಲತಃ ಚಿತ್ರದುರ್ಗದವರು. MA (English) M Ed , Diploma in Journalism ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅವರು ಜೂನ್‌ 2020 ರಲ್ಲಿ ನಿವೃತ್ತಿ ಹೊಂದಿದರು. ಚಿತ್ರದುರ್ಗದ ಲೇಖಕಿಯರ ಕಥಾಸಂಕಲನದ 'ಮೊದಲ ಹೆಜ್ಜೆ' ಕೃತಿಯ ಸಂಪಾದಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ನುಡಿಗನ್ನಡಿ (ಆಕಾಶವಾಣಿಯ ನಲ್ನುಡಿಗಳ ಸಂಕಲನ), ಅಹಲ್ಯಾಂತರಂಗ, ಏಕಸೂತ್ರದಲ್ಲಿ ಅನೇಕ (ವೈಚಾರಿಕ ಲೇಖನಗಳ ಸಂಕಲನ) , ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ರಸಪ್ರಶ್ನೆಗಳು, ಉತ್ತರೆಯ ಸ್ವಗತ, ಇವರು ಚಿರಂಜೀವಿಗಳು.(ಪುರಾಣಗಳ ಚಿರಾಯುಗಳ ಬಗ್ಗೆ), ಅಂತಃಕರಣದ ...

READ MORE

Related Books