ವಿಚಾರ ಸಂಪದ

Author : ಮಹಾದೇವ ಬಸರಕೋಡ

Pages 86

₹ 60.00




Year of Publication: 2014
Published by: ಬಸರಕೋಡ ಪ್ರಕಾಶನ
Address: ಬಸರಕೋಡ ಪ್ರಕಾಶನ ಅಮೀನಗಡ-587112 ಬಾಗಲಕೋಟೆ ಜಿಲ್ಲೆ
Phone: 9902755950

Synopsys

ಜೀವಪ್ರೀತಿ ಹಾಗೂ ಮಾನವಿಯ ಸಂಬಂಧಗಳ ನೆಲೆಗಟ್ಟಿನ ಮೇಲೆ ಬದುಕಿನ ಸಾರ್ಥಕತೆಗೆ ಒಂದಷ್ಟು ಶಕ್ತಿ ತುಂಬಬಲ್ಲ ಚೇತೋಹಾರಿ ಮತ್ತು ಪ್ರೇರಣಾತ್ಮಕ ಬರಹಗಳ ಸಂಗ್ರಹ.ಸುಮಾರು 30 ಸತ್ವಪೂರ್ಣ ಲೇಖನಗಳು ಇಲ್ಲಿದ್ದು ಖ್ಯಾಥ ಕಥೆಗಾರ ದಿ. ಅಬ್ಬಾಸ್ ಮೇಲಿನಮನಿ ಅವರ ಬೆನ್ನುಡಿ, ಬಾಗಲಕೋಟೆಯ ಶ್ರೀ ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರ ಮುನ್ನುಡಿಯಿದೆ.

About the Author

ಮಹಾದೇವ ಬಸರಕೋಡ
(14 June 1972)

ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ.  ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...

READ MORE

Related Books