ಅತ್ಯಾಚಾರ ಎದುರಿಸುವುದು ಹೇಗೆ?

Author : ಭದ್ರಾವತಿ ರಾಮಾಚಾರಿ

Pages 128

₹ 135.00




Year of Publication: 2020
Published by: ಕಾವ್ಯ ಸ್ಪಂದನ ಪಬ್ಲಿಕೇಷನ್
Address: ಬೆಂಗಳೂರು

Synopsys

ಲೇಖಕ ಡಾ. ಭದ್ರಾವತಿ ರಾಮಾಚಾರಿ ಅವರ ಕೃತಿ-ಅತ್ಯಾಚಾರ ಎದುರಿಸುವುದು ಹೇಗೆ?. ಅತ್ಯಾಚಾರದ ಘಟನೆಗಳ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟನೆಯ ಕೂಗು ಕೇಳಿ ಬಂದಿದ್ದು 1990ರಲ್ಲಿ; ಅದೂ ಟರ್ಕಿಯಲ್ಲಿ. ನಂತರ ಯುರೋಪ ಎಲ್ಲೆಡೆ ಹರಡಿ ಇದೀಗ ನಮ್ಮ ದೇಶದಲ್ಲಿ ನಿರ್ಭಯಾ ಪ್ರಕರಣ ಆದಾಗಿನಿಂದ ಹೆಚ್ಚು ಚರ್ಚೆಯಲ್ಲಿದೆ. ಅತ್ಯಾಚಾರಿಯ ಕಣ್ಣುಗಳಿಗೆ ಬೆರಳನ್ನು ಚುಚ್ಚಬೇಕು. ಆತನ ಕೊರಳಿಗೆ ಗುದ್ದು ನೀಡಬೇಕು. ಜೋರಾಗಿ ಕಿರುಚಿಕೊಳ್ಳಬೇಕು, ಸ್ಯಂ ರಕ್ಷಣೆಗೆ ಕರಾಟೆಯಂತಹ ತರಬೇತಿ ಪಡೆಯಬೇಕು ಇತ್ಯಾದಿ ಕುರಿತು ಯುವತಿ/ಮಹಿಳೆಯರಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕುರಿತು ವಿಸ್ತೃತವಾಗಿ ಚರ್ಚಿಸಿರುವ ಹಾಗೂ ಯುವತಿ/ಮಹಿಳೆಯರಿಗೆ ಮಾಹಿತಿಪೂರ್ಣ ಪ್ರೇರಣಾತ್ಮಕ ಕೃತಿ ಇದು. 

 

About the Author

ಭದ್ರಾವತಿ ರಾಮಾಚಾರಿ
(09 August 1972)

ಲೇಖಕ ಡಾ. ಭದ್ರಾವತಿ ರಾಮಾಚಾರಿ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ (ಜನನ: 09-08-1972) ತಾಲೂಕಿನ ಬೊಮ್ಮನಕಟ್ಟೆ ಗ್ರಾಮದವರು. ತಂದೆ ವೀರಾಚಾರಿ, ತಾಯಿ ಪಾರ್ವತಮ್ಮ, ಕನ್ನಡದಲ್ಲಿ ಎಂ.ಎ. ಪದವೀಧರರು. ಕೃತಿಗಳು: ಚೈತ್ರ ತಂದ ಚಿಗುರು, ಹರಕೆ, ನೆನಪೊಂದೇ ಶಾಶ್ವತ,  ಭಾವನದೀ, ಅಮ್ಮಾ...ನನ್ನನ್ನೂ ‌ಸ್ವಲ್ಪ ಅರ್ಥ ಮಾಡ್ಕೋ, ಆಶಾಕಿರಣ(ಇವು ಕಾದಂಬರಿಗಳು), ದೀಪ ಹಚ್ಚುವ ಸಮಯ(ಕಥಾಸಂಕಲನ), ಆಶಾ ಕಿರಣ(ಮಕ್ಕಳ ಕಾದಂಬರಿ), ಅಭಿರಾಮಿ ಮತ್ತು ಇತರ ಕಥೆಗಳು, ನಮ್ಮ ಬದುಕಿನ ಸುತ್ತ, ಕನಸುಗಳು ನೂರಾರು, ಹೊಸ ಚಿಗುರು(ಸಂಪಾದಿತ ಕೃತಿ), ತುಂತುರು ಮಳೆ ಹನಿ(ಸಂಪಾದಿತ ಕೃತಿ), ಪಯಣಿಗರು, ಬೆಳಕು ನೀನಾದೆ, ಬೇವರ್ಸಿ ಬರೆದ ಕಥೆಗಳು (ಇವು ಕಥಾ ಸಂಕಲನಗಳು), ಭದ್ರಾವತಿ ಆಕಾಶವಾಣಿಯಿಂದ 12 ಕಥೆಗಳು, ರಶ್ಮಿ, ಸಂದರ್ಶನ, ನಾಟಕಗಳು ಪ್ರಸಾರವಾಗಿವೆ. ಸುವರ್ಣ ಸ್ವಾತಂತ್ರ್ಯ ನಾಟಕ ರಚನೆ, ಕರ್ನಾಟಕd ಎಲ್ಲ ಬಾನುಲಿ ...

READ MORE

Related Books