ಪ್ರೀತಿ ಮತ್ತು ಸಾರ್ಥಕತೆ

Author : ರನ್ನರಾಜ

Pages 224

₹ 216.00




Year of Publication: 2018
Published by: ಸುವರ್ಣ ದೇಶ ಎಜುಕೇಷನ್ ಪ್ರೈ ಲಿ
Address: ಬೆಂಗಳೂರು-560073

Synopsys

ಲೇಖಕ ರನ್ನರಾಜ ಅವರ ಕೃತಿ-ಪ್ರೀತಿ ಮತ್ತು ಸಾರ್ಥಕತೆ. ಇದು ಪ್ರೇಮಿಗಳ ಉಪನಿಷತ್ತು ಎಂಬ ಉಪಶೀರ್ಷಿಕೆಯಡಿ ವಿಷಯ ವಸ್ತುವನ್ನು ಚರ್ಚಿಸಲಾಗಿದೆ. ಪ್ರೀತಿಯು ಯುವಪ್ರೇಮಿಗಳಿಗೆ ಸರ್ವಸ್ವು. ಈ ಕಾಲಘಟ್ಟದಲ್ಲಿ ಅವರು ಯಾರ ಮಾತನ್ನೂ ಕೇಳುವುದಿಲ್ಲ. ತಮ್ಮದೇ ಸುಂದರ ಜಗತ್ತಿನಲ್ಲಿ ಇದ್ದು, ಏನಾದರೂ, ಯಾವುದನ್ನಾದರೂ ಎದುರಿಸಬಹುದು ಎಂಬ ಧೈರ್ಯ ಹೊಂದಿರುತ್ತಾರೆ. ಆದರೆ, ಅದು ವಾಸ್ತವವಾಗಿರುವುದಿಲ್ಲ. ಪ್ರೀತಿಯ ಸಾಫಲ್ಯವು ಪ್ರೇಮಿಗಳಿಬ್ಬರ ಮಧ್ಯೆ ಇರುವ ಅರಿವಿನ ತಾದಾತ್ಮಕತೆಯನ್ನು ಅವಲಂಬಿಸಿರುತ್ತದೆ. ಈ ತಾದಾತ್ಮಕತೆ ತಪ್ಪಿದರೆ ಅದು ಸಾರ್ಥಕತೆ ಪಡೆಯದು. ಪ್ರೇಮಿಗಳ ಜೀವನದಲ್ಲಿ ಹೂವಾಗಿ ಪಲ್ಲವಿಸದು. ಇಂತಹ ಜೀವನ ದುರಂತಮಯವಾಗುತ್ತದೆ. ಪ್ರೀತಿಯು ಸಾರ್ಥಕತೆ ಪಡೆದಾಗಲೇ ಆ ಪ್ರೀತಿಗೆ ಅರ್ಥವಿರುತ್ತದೆ. ಇಂತಹ ವಿಚಾರಗಳ ಪ್ರತಿಪಾದನೆಯು ಈ ಕೃತಿಯ ಜೀವಾಳವಾಗಿದೆ.

About the Author

ರನ್ನರಾಜ

ಲೇಖಕ ರನ್ನರಾಜ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳದವರು. ಕಡೂರಿನ ಗಿರಿಯಾಪುರದಲ್ಲಿ ಪ್ರೌಢಶಿಕ್ಷಣ, ತುಮಕೂರಿನ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಪಿಯುಸಿ ಹಾಗೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಬಿ.ಎಸ್.ಸಿ. ನಂತರ ಗುಲಬರ್ಗಾ ವಿ.ವಿ.ದಿಂದ ಗಣಿತ ವಿಷಯದಲ್ಲಿ ಎಂ.ಎಸ್.ಸಿ. ಪೂರ್ಣಗೊಳಿಸಿದರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃತಿಗಳು: ಅಪ್ಪನೆಂದರೆ ದೇವರಲ್ಲ, ದುಡ್ಡು ಪ್ಲಸ್ ಮೈಂಡು, ಸೋತವನ ಸಾವಿರ ಕಥೆಗಳು, ಪ್ರೀತಿ ಮತ್ತು ಸಾರ್ಥಕತೆ ಇತ್ಯಾದಿ ...

READ MORE

Related Books