ಅಪ್ಪ ಕಾಣೆಯಾಗಿದ್ದಾನೆ

Author : ಬೇಲೂರು ರಘುನಂದನ್

Pages 128

₹ 150.00




Year of Publication: 2022
Published by: ಅಮೂಲ್ಯ ಪುಸ್ತಕ
Address: #83/1, 15ನೆಯ ಮುಖ್ಯರಸ್ತೆ, (ವಿಜಯನಗರ ಕ್ಲಬ್ ಎದುರುರಸ್ತೆ) ವಿಜಯನಗರ, ಬೆಂಗಳೂರು - 560040.
Phone: 9448676770 9620796770

Synopsys

'ಅಪ್ಪ ಕಾಣೆಯಾಗಿದ್ದಾನೆ' ಬೇಲೂರು ರಘುನಂದನ್ ಅವರ ಕಥಾಸಂಕಲನವಾಗಿದೆ. ಒಂಬತ್ತು ಕತೆಗಳಿರುವ ಈ ಸಂಕಲನದ ಶೀರ್ಷಿಕೆಯೂ ಆಗಿದೆ. ಆ ಬಾಲಕನ ಬಾಯಲ್ಲಿ ಬರುವ ಮಾತು ಸಂಕಲನದ ಕತೆಗಳಲ್ಲಿ ಗುಪ್ತವಾಗಿ ಅಣುರಣಿಸುತ್ತದೆ. ಒಂದೆರಡು ಅಪವಾದಗಳಿದ್ದರೂ ಸಂಕಲನದ ಬಹುತೇಕ ಕಥೆಗಳಲ್ಲಿ ಗಂಡ, ಅಪ್ಪ, ಮಗ ಮುಂತಾಗಿ ಕರೆಯಲಾಗುವ 'ಪುರುಷ' ಕುಲವೇ ಕಣ್ಮರೆಯಾಗಿದೆ. ಕಥಾ ನಿರೂಪಣೆಯಲ್ಲಿ ಈ ಅದೃಶ್ಯ ಪುರುಷ ಕ್ವಚಿತ್ತಾಗಿ ಕಾಣಿಸಿಕೊಂಡರೂ ನಾಪತ್ತೆಯಾಗಿರುತ್ತಾನೆ ಅಥವಾ ಹಿನ್ನೆಲೆಗೆ ಸರಿದಿರುತ್ತಾನೆ. ಈ ದೃಷ್ಟಿಯಿಂದ ಬೇಲೂರು ರಘುನಂದನ್ ಅವರ ಪ್ರಸ್ತುತ ಸಂಕಲನದ ಕಥೆಗಳನ್ನು ಸ್ತ್ರೀ ಕೇಂದ್ರಿತ ಕಥೆಗಳೆಂದೇ ಕರೆಯಬಹುದಾಗಿದೆ.

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books