ಮಕ್ಕಳ ಸಮಗ್ರ ಕಥೆಗಳು

Author : ಜೀನಹಳ್ಳಿ ಸಿದ್ಧಲಿಂಗಪ್ಪ

Pages 300

₹ 250.00




Year of Publication: 2015
Published by: ಶ್ರುತಿ ಪ್ರಕಾಶನ
Address: #90, ವಿವೇಕಾನಂದ ಬ್ಲಾಕ್, ಟೀಚರ್ಸ್ ಲೇಔಟ್, ಮೈಸೂರು- 570029
Phone: 9886026085

Synopsys

‘ಮಕ್ಕಳ ಸಮಗ್ರ ಕಥೆಗಳು’ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ಮಕ್ಕಳಿಗಾಗಿ ರಚಿಸಿರುವ ಕತಾಸಂಕಲನ. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿರುವ ಸಿದ್ಧಲಿಂಗಪ್ಪ ಅವರು ಸರಳ ಭಾಷೆಯಲ್ಲಿ ಮಕ್ಕಳ ಮನೋಲೋಕ ವಿಸ್ತಾರವಾಗಲು ಬೇಕಾಗುವಂತಹ ಕತೆಗಳನ್ನು ರಚಿಸಿದ್ದಾರೆ.

ಈ ಕೃತಿಯಲ್ಲಿ ಜಾಣಮಗ, ಕುದುರೆಯ ಸಹವಾಸ, ಕಡುಬಿನ ಅಳಿಯಂದಿರು, ಆಗೊಂದುಸಲ ಈಗೊಂದು ಸಲ, ಸುಳ್ಳಿನ ಫಲ, ಅಳತೆಯ ಮೋಸ, ಅಸೂಯೆಯ ಫಲ, ಅತಿಯಾಸೆ ಗತಿಗೇಡು, ನಂಬಿಕೆಯ ಮೋಸ, ಸೇರಿಗೆ ಸವಾಸೇರು, ಮುತ್ತಿನ ಚೀಲ, ಕಾಳಿನ ಚೀಲಗಳು, ಮುತ್ತಿನ ಹಂಚಿಕೆ, ಜಾಣಪದ ಜಾಣ, ಹುಡುಗಿಯ ಜಾಣತನ, ಮುರಿಯದೆ ಮೂರು ಜನರಿಗೆ ಹಂಚು, ಅಜ್ಜಿಯ ಒಗಟು, ದುಡಿತದ ಫಲ, ಹೂಮುಡಿಸುವ ಲೆಕ್ಕ, ನೀನು ಬಂದರೆ ನೂರು ಗಿಣಿ, ನಾನೂರು ರೂಪಾಯಿಗೆ ನಾನೂರು, ಕುದುರೆಯ ಮಾರಾಟ, ನೂರು ಜನಕೆ ನೂರು ರೂಪಾಯಿ, ಬಾಳೆಹಣ್ಣು ಮಾರಿದ ಜಾಣರು, ಬೆಕ್ಕು ತಿಂದ ಇಲಿಗಳ ಲೆಕ್ಕ, ಸುಂಕನೀಡಿ ಸಂತೆಗೆ ಬಂದ ಕುರಿಗಳು, ಎರಡು ಮಾತು ಪರಿಹಾರ ಒಂದು, ಬಾಳೆಕಾಯಿ ಹಂಚಿಕೊಂಡ ಏಳು ಜನ, ಕುದುರೆಯ ಲೆಕ್ಕ, ಹಣ್ಣಿನ ಹಂಚಿಕೆ, ಹಿಂದೆ ಮುಂದೆ ನೋಡಿ ಸ್ವಾಮಿ, ಹನುಮಂತ ದೇವರ ಮುಖ ಸೊಟ್ಟಗಾಗಲಿ, ಆಗುವುದೆಲ್ಲ ಒಳ್ಳೆಯದಕ್ಕೆ, ದೇವರಿಗೆ ಪೂಜಿಸಿದ ಹೂವುಗಳೆಷ್ಟು, ಏಳು ಜನರಿಗೆ ಏಳು ಚಿನ್ನದ ಗಟ್ಟಿಗಳು ಸೇರಿದಂತೆ 67ಕತೆಗಳಿವೆ.

 

About the Author

ಜೀನಹಳ್ಳಿ ಸಿದ್ಧಲಿಂಗಪ್ಪ
(17 May 1958)

ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ದಾವಣಗೆರೆ ಜಿಲ್ಲೆಯ, ನ್ಯಾಮತಿ ತಾಲೂಕಿನ ಜೀನಹಳ್ಳಿಯವರು. ತಂದೆ- ಎಂ. ತೀರ್ಥಪ್ಪ, ತಾಯಿ- ನಿಂಗಮ್ಮ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಜೀನಹಳ್ಳಿಯಲ್ಲಿ ಹಾಗೂ ಪಿ.ಯು.ಸಿಯನ್ನು ನ್ಯಾಮತಿಯಲ್ಲಿ, ಬಿ.ಎ.ಪದವಿಯನ್ನು ಶಿವಮೊಗ್ಗದಲ್ಲಿ ಪೂರ್ಣಗೊಳಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದರು. ಶಿಕಾರಿಪುರ, ಬೆಮಿಲ್ ಖೇಡ(ಹುಮನಾಬಾದ ತಾಲೂಕು) ಅಜ್ಜಂಪುರ ಕಾಲೇಜುಗಳಲ್ಲಿ ಗುತ್ತಿಗೆ ಕನ್ನಡ ಉಪನ್ಯಾಸಕರಾಗಿ(1980-1983) ಕಾರ್ಯನಿರ್ವಹಿಸಿದರು. 1983 ರಲ್ಲಿ ಸರಕಾರಿ ಕೆಲಸಕ್ಕೆ ಸೇರಿ ಬೆಂಗಳೂರು, ಮೈಸೂರಿನ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅಧೀಕ್ಷಕರು, ಪತ್ರಾಂಕಿತ ವ್ಯವಸ್ಥಾಪಕರು, ಪತ್ರಾಂಕಿತ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜನಪದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ...

READ MORE

Related Books