ಅಷ್ಟ ಮಂಗಲ

Author : ಕೆ.ಕೆ. ಗಂಗಾಧರನ್

Pages 176

₹ 90.00




Year of Publication: 2013
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060\n

Synopsys

ಲೇಖಕ ಕೆ.ಕೆ. ಗಂಗಾಧರನ್ ಅವರ ಕಥಾ ಸಂಕಲನ "ಅಷ್ಟ ಮಂಗಲ". ಏಟು ಮಾನೂರ್ ಶಿವಕುಮಾರ್ ಬರೆದ ಮಲಯಾಳಂ ಕೃತಿಯ ಅನುವಾದವಾಗಿದೆ .ಮಾಂತ್ರಿಕ ಕಾದಂಬರಿಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರೆನಿಸಿದ ಅವರು ಬರೆದ ಕಾದಂಬರಿಗಳು ನೂರಾನಲ್ವತ್ತು. ಇವುಗಳ ಪೈಕಿ ಕನ್ನಡಕ್ಕೆ ಹದಿನೈದು ಕಾದಂಬರಿಗಳು ಅನುವಾದಗೊಂಡಿವೆ. ಅಷ್ಟಮಂಗಲ ಕಾದಂಬರಿ ಶ್ರೀ ಏಟುಮಾನೂರ್‌ರವರ ಜನಪ್ರಿಯ ಕೃತಿ.

About the Author

ಕೆ.ಕೆ. ಗಂಗಾಧರನ್
(10 March 1949)

ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎಂಬ ಹಳ್ಳಿಯಲ್ಲಿ ಜನಿಸಿದ ಗಂಗಾಧರನ್‌ ಅವರು ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆಯಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿಎಸ್‌ಸಿ ಪದವಿ ಪಡೆದರು. ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌ನಲ್ಲಿ ವೃತ್ತಿ (1970) ಆರಂಭಿಸಿದ ಅವರು ನಂತರ ಅಂಚೆ ಇಲಾಖೆಯ ರೈಲ್ವೆ ಮೇಲ್‌ ಸರ್ವಿಸ್‌ ವಿಭಾಗದಲ್ಲಿ (1974) ಉದ್ಯೋಗ ಪಡೆದರು. ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿದ ಅವರು ನಿವೃತ್ತ (2009)ರಾದರು. ಸದ್ಯ ಬೆಂಗಳೂರಿನ ವಿಶ್ವನೀಡಂನಲ್ಲಿ ನೆಲೆಸಿದ್ದಾರೆ.   ...

READ MORE

Related Books