ಹೊನ್ನ ಹೊಳೆಯ ಅರಸು

Author : ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)

Pages 296

₹ 225.00




Year of Publication: 2015
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ- 577204
Phone: 9449886390

Synopsys

ಸಾಹಿತಿ ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್) ಅವರು ಮಕ್ಕಳಿಗಾಗಿ ಬರೆದ ಸಮಗ್ರ ಕಥೆಗಳ ಸಂಕಲನವಿದು-ಹೊನ್ನ ಹೊಳೆಯ ಅರಸು. ಜನ್ಮಶತಮಾನೋತ್ಸವದ ನಿಮಿತ್ತ ಈ ಕೃತಿ ಪ್ರಕಟಿಸಿದ್ದು, ಮನೆಗೆ ಬಂದ ಮಹಾಬಲಿ, ಹೊನ್ನ ಹೊಳೆಯ ಅರಸು, ಕಳ್ಳರ ಪಜೀತಿ, ಕಿಲಾಡಿ ಮಂಗಣ್ಣ, ಇಲಿ ಮಗಳು ಹಾಡಿದಾಗೆ, ಹೋತನ ಬೆನ್ನೇರಿದ ತೋಳ, ಕಾಣೆಯಾದ ಕಬ್ಬಿಣರಾಯ, ಹುಲಿಗಳ ದಿಬ್ಬಣ, ನಳ-ದಮಯಂತಿ, ಗೀಗಿ, ಮರಿಯಾನೆ, ಕಾವೇರಿ, ಹನ್ನೊಂದು ಹಂಸಗಳು, ಸಿಗೋರ ಹೀಗೆ ಒಟ್ಟು14 ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಪ್ರತಿ ಕಥೆಯು ಸರಳ ಭಾಷೆಯಲ್ಲಿ, ಮಕ್ಕಳ ಕಾಲ್ಪನಿಕ ಸಾಮರ್ಥ್ಯದ ವಿಸ್ತಾರ ಹೆಚ್ಚಿಸುವತ್ತ ಗಮನ ನೀಡಿದ್ದು, ನಿರೂಪಣಾ ಶೈಲಿಯೊಂದಿಗೆ ಓದುಗರನ್ನು ಸೆಳೆಯುತ್ತವೆ.

About the Author

ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)
(15 May 1915 - 04 April 1976)

ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು.  ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...

READ MORE

Related Books