ಮುತ್ತುಗ

Author : ಸ. ರಘುನಾಥ

Pages 424

₹ 350.00




Year of Publication: 2020
Published by: ನಿವೇದಿತ ಪ್ರಕಾಶನ
Address: #3437, 1ನೇ ಮಹಡಿ, 9ನೇ ಅಡ್ಡರಸ್ತೆ, ಶಾಸ್ತ್ರಿ ನಗರ, ಬನಶಂಕರಿ, ಬೆಂಗಳೂರು-28
Phone: 9448733323

Synopsys

ಲೇಖಕ ಸ. ರಘುನಾಥ ಅವರ ಸಮಗ್ರ ಸಾಹಿತ್ಯ ಸಂಪುಟ-1ರ ಭಾಗವಾಗಿ ‘ಮುತ್ತುಗ’ ಕಥಾ ಸಂಕಲನವಿದು. ತಂಗಡಿ ಹೂವು (1978-2004) ಕಥಾ ಸಂಕಲನದ 15 ಕಥೆಗಳು, ನಡುವಿನ ಕಥೆಗಳು-ಭಾಗ-2ರಲ್ಲಿಯ 6 ಕಥೆಗಳು, ಬಿರೇಬಿತ್ಲೆ ವೆಂಕಟಸ್ವಾಮಿ ಮತ್ತು ಇತರೆ ಕಥೆಗಳಲ್ಲಿಯ (2005-2012, ಭಾಗ-3) ಹತ್ತು ಕಥೆಗಳು, 2005ರ ಕಥೆಗಳು (ಭಾಗ-4) ರಲ್ಲಿಯ 4 ಕಥೆಗಳು, ಇಟ್ಟುಗೊಜ್ಜು (ಭಾಗ-5) ಕಥಾ ಸಂಕಲನದ 25 ಕಥೆಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ.

‘ಕಾಲ ಕಟ್ಟಿ ತೋರಿಸಿದ ದಾರಿಯಲ್ಲಿ ನಾನು ಕಂಡಿದ್ದು, ಜೊತೆ ಮಾಡಿಕೊಂಡು ಎದೆಗೆ ತೋರಿಸಿದ್ದು, ಹೇಳಿದ್ದು ಇಲ್ಲಿದೆ. ಹಾಗಾಗಿ ಸ್ಪರ್ಶ, ವಾಸನೆ ಇಲ್ಲಿದೆ. ಆದರೆ, ರುಚಿಯ ಬಗ್ಗೆ ಹೇಳಲಾರೆ. ಅದು ಓದುಗರಿಗೆ ಬಿಟ್ಟಿದ್ದು. ಪ್ರಕೃತಿ, ಪರಿಸರ, ಜನ, ಪ್ರಾಣಿ, ಪಕ್ಷಿ, ಊರು, ಕೇರಿ ಹೀಗೆ ಎಲ್ಲದರ ಋಣ ನನ್ನ ಮೇಲಿದೆ. ಎಂದು ಲೇಖಕರು ತಮ್ಮ ಕಥೆಗಳ ಬಗ್ಗೆ ಹೇಳಿಕೊಳ್ಳುವ ಮೂಲಕ ಈ ಎಲ್ಲ ಕಥೆಗಳಿಗಿರುವ ಸ್ಫೂರ್ತಿ., ಕಥಾ ವಸ್ತುವಿನ ರಚನೆಯ ಸುಳಿವು ನೀಡಿದ್ದಾರೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books