ಮಾಲತಿ ಮಾತಾಡಿದಳು

Author : ಶ್ರೀಧರ ಬಳಗಾರ

Pages 168

₹ 170.00




Year of Publication: 2023
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಶ್ರೀಧರ ಬಳಗಾರ ಅವರು ನಲವತ್ತು ವರ್ಷಗಳಿಂದ ಮಲೆನಾಡ ಒಡಲಲ್ಲಿರುವ ಕುಟುಂಬಗಳ ಕತೆಗಳನ್ನು ನಿರೂಪಿಸುತ್ತ ಬಂದಿದ್ದಾರೆ. ಕತೆಗಳು ಕತೆಗಾರರನ್ನು ಮಾಗಿಸುತ್ತ, ತಾವೂ ಮಾಗುತ್ತ ಓದುಗರ ಕೈ ಸೇರುತ್ತಿವೆ. ಕಥೆಗಾರ ಈಗ ಕಥೆಗಳನ್ನು ಹುಡುಕುವುದಿಲ್ಲ ಅವು ಕಥೆಗಾರನ ಬಳಿ ಬಂದು ಸುಮ್ಮನೆ ನಿಲ್ಲುತ್ತವೆ. ಸದ್ದು ಮಾಡದೆ ತಾವಾಗಿಯೇ ಬಳಿ ಬಂದು ನಿಲ್ಲುವ ಕತೆಗಳಿಗೆ ಸದ್ದಿಲ್ಲದ ನುಡಿ ನಿರೂಪಣೆಯ ಸಹಜ ಚಂದ ಕಲ್ಪಿಸುವ ಕಸುಬು ಕತೆಗಾರನಿಗೆ ಸಿದ್ಧಿಸಿದೆ. ಹೆಣ್ಣಿರಲಿ ಗಂಡಿರಲಿ; ವಯಸ್ಸು ಹಿರಿದೋ ಕಿರಿದೋ ಅವರಿಗೆ ಒದಗುವ ಬದುಕಿನ ಖುಷಿಯಿರಲಿ ಆತಂಕ ತಲ್ಲಣಗಳಿರಲಿ ಅವುಗಳನ್ನು ಹೊತ್ತವರ ಹೊರೆ ಭಾರವಾದಾಗ ವಿಶ್ವಾಸದಿಂದಲೇ ತಮ್ಮ ನಂಬಿಕೊಂಡು ದೈವಗಳ ಮುಂದಿರಿಸಿ ನಿರಾಳತನದಲ್ಲಿ ಬೆತ್ತಲಾಗುತ್ತವೆ, ಸಂಶಯವಿಲ್ಲದ ನಿಲುವಿನಲ್ಲಿ. ಇಲ್ಲಿ ಸುಮ್ಮನೆ; ಅಲ್ಲಿ ನಮ್ಮ ಮನೆ ಎಂಬ ನಿಲುವು ಮಾತ್ರ ಇವರಲ್ಲಿ ಕಾಣುವುದಿಲ್ಲ. ಇಲ್ಲಿಯ ಮನೆಯೂ ಸುಮ್ಮನಲ್ಲ ಎಂಬುದು ಇಲ್ಲಿನ ಹೆಣ್ಣು ಗಂಡುಗಳ ಅಚಲ ವಿಶ್ವಾಸವೇ ಆಗಿದೆ. ಕಥೆಗಾರನ ಸಂತ ತತ್ವದ ಹಿರಿಮೆಯಿದು. ಮನುಷ್ಯನಿಗೆ ಸುಸ್ಥಿರ ಬಾಳ್ವೆ ಎಂಬುದು ಹಿಂದೆಯೂ ಇರಲಿಲ್ಲ; ಈಗಲೂ ಇಲ್ಲ; ಮುಂದೆಯೂ ಇರಲಾರದು. ನೆಲದ ಬದುಕಿನಲ್ಲಿ ಕೇಡು-ಒಳಿತು ಒಟ್ಟೋಟ್ಟಿಗೇ ಇರುವುದರಿಂದ ಮನುಷ್ಯ ಬದುಕಿಗೊಂದು ಸವಾಲಿದ್ದೇ ಇರುತ್ತದೆ. ಈ ಸವಾಲನ್ನೇ ಸ್ವೀಕರಿಸಿ ಸಂಶಯವಿಲ್ಲದ ದೈವಗಳನ್ನು ನಂಬಿ ನೆಲೆ ಪಡೆಯುವ ಇಲ್ಲಿನ ಬಾಳೆ ಹಿರಿದಾಗಿ ಕಾಣುತ್ತದೆ. ಕಾಣಿಸುವ ಕಥೆಗಾರನ ಕಸುಬಿನಲ್ಲಿ ದೈವತ್ವ ಬೆರೆತು ನಿಂತಿದೆ ಎಂದು ಲೇಖಕ ಅಮರೇಶ ನುಗಡೋಣಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...

READ MORE

Related Books