ರಥಬೀದಿ ಎಕ್ಸ್ ಪ್ರೆಸ್

Author : ವಿಕಾಸ ನೇಗಿಲೋಣಿ

Pages 83

₹ 110.00




Year of Publication: 2023
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು - 560004
Phone: 8088822171

Synopsys

ಏಕಾಂತದ ನಿಟ್ಟುಸಿರು, ಹರೆಯದ ಪುಳಕ, ಕೀಳರಿಮೆಯ ಹತಾಶೆ, ತಬ್ಬಲಿತನದ ಬೇನೆ, ಪ್ರೀತಿ ಭಾವದ ರೋಮಾಂಚನ, ಪರೀಕ್ಷೆ ಗೆದ್ದ ಆತ್ಮವಿಶ್ವಾಸ, ಬಾವಿಕಟ್ಟೆ ಒದಗಿಸಿದ ನಿರಾಳತೆ, ರಥಬೀದಿ ಮತ್ತು ಪುಷ್ಕರಣಿಯ ನಡುರಾತ್ರಿಯ ಪಿಸುಮಾತು ಎಲ್ಲವೂ ಬೆರೆತ ಮೃದು ಮಧುರ ಬರಹಗಳ ಸಂಕಲನ. ಪ್ರತಿಯೊಬ್ಬರೊಳಗೊಂದು ಹಸಿರಾಗಿರುವ, ಪ್ರೇಮ ಪರಿಮಳದ, ಮತ್ತೆ ಮತ್ತೆ ಹೋಗಬಯಸುವ ಸಂತೋಷ ತುಂಬಿರುವ ಗೋಕುಲ ಇರುತ್ತದೆ. ಇದು ಕವಿಯಾಗಿ ಬೆಳೆದ ಆತಂಕದ ಅಮಾಯಕ ಹುಡುಗನ ಗೋಕುಲ ಕಥನ.

About the Author

ವಿಕಾಸ ನೇಗಿಲೋಣಿ

ವಿಕಾಸ ನೇಗಿಲೋಣಿ, ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ನೇಗಿಲೋಣಿಯಲ್ಲಿ. ಊರಲ್ಲೇ ಪ್ರಾಥಮಿಕ ಶಿಕ್ಷಣ,  ಉಡುಪಿಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದರು.  ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ವ್ಯಾಸಂಗ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ, ಅನಂತರ ವಿಜಯ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ಸುವರ್ಣ ನ್ಯೂಸ್, ಸಖಿ ನಿಯತಕಾಲಿಕೆಗಳಲ್ಲಿ ಸುಮಾರು 16 ವರ್ಷಗಳ ಕಾಲ ವೃತ್ತಿ ನಿರ್ವಹಿಸಿದರು.  ‘ಯಶೋದೆ’, ‘ಗಾಂಧಾರಿ’ ಸೇರಿದಂತೆ ಹಲವು ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿದ್ದಾರೆ.  ‘ಯಶೋದೆ’, ‘ಗಾಂಧಾರಿ’, ‘ರಾಧಾ ರಮಣ’, ‘ಅಗ್ನಿಸಾಕ್ಷಿ’, ‘ಸೀತಾವಲ್ಲಭ’, ‘ನಮ್ಮನೆ ಯುವರಾಣಿ’, ‘ಮಿಥುನ ರಾಶಿ’ ಮೊದಲಾದ ಧಾರಾವಾಹಿಗಳಿಗೆ ಹಾಡುಗಳನ್ನು ಬರೆದ ...

READ MORE

Related Books