ನಿಲ್ಲು ನಿಲ್ಲೆ ಪತಂಗ

Author : ಶೈಲಜಾ ಹಾಸನ

Pages 126

₹ 150.00




Year of Publication: 2023
Published by: ವಿಕ್ರಂ ಪ್ರಕಾಶನ
Address: #23, 18th A\' ಕ್ರಾಸ್, 1st ಮೈನ್ ಭುವನೇಶ್ವರಿ ನಗರ, ಹೆಬ್ಬಾಳ ಬೆಂಗಳೂರು - 560024
Phone: 8971091760, 9740994008

Synopsys

"ನಿಲ್ಲು ನಿಲ್ಲೆ ಪಂತಂಗ.." ಕೇವಲ ಕಥಾ ಸಂಕಲನವಾಗಿ ನಮ್ಮನ್ನು ತಾಕುವುದಿಲ್ಲ. ಅದರಲ್ಲೊಂದು ಜತೆಜತೆಗೆ ಕರೆದೊಯ್ಯುವ ಮತ್ತು ಚಿತ್ರಣವನ್ನು ಚಿತ್ರವಾಗಿ ಬದಲಾಯಿಸುವ ಆಸ್ಥೆಯ ಕುಸುರಿ ಕೆಲಸದ, ಮನಸ್ಸಿಗೆ ಸರಕ್ಕನೆ ಒಮ್ಮೆ ತಾಕಿ ನಿಲ್ಲುವ ಗಟ್ಟಿ ಗುಣವಿದೆ. ಕತೆಗಳೆಂದರೆ ಸಂಗತಿಗಳನ್ನು ಜೀವಂತವಾಗಿ ನಮ್ಮೆದುರಿಗೆ ತೆರೆದಿಡುತ್ತಾ ಹಸಿ ಬಿಸಿ ಸತ್ಯಗಳನ್ನು ಬೆತ್ತಲು ಮಾಡುತ್ತಾ, ಇದೆಲ್ಲ ನಮಗೂ ಎಲ್ಲೊ ಕನೆಕ್ಟ್ ಆಗುವ ಗಾಢ ಪ್ರಕ್ರಿಯೆ. ಆ ನಿಟ್ಟಿನಲ್ಲಿ ಶೈಲಜಾ ಹಾಸನ ಗೆಲ್ಲುತ್ತಾರೆ. ಓದುಗನಾಗಿ ಕತೆಯಾಳಕ್ಕೆ ಒಯ್ಯುತ್ತಾ ನಮ್ಮ ನಿರೀಕ್ಷೆಗಳನ್ನು ಮತ್ತೊಂದು ದಿಕ್ಕಿಗೆ ತಿರುಗಿಸಿ ಸುಳ್ಳಾಗಿಸುವ, ಕೆಲವೊಮ್ಮೆ ಅದಕ್ಕೂ ಮಿರಿದ ತಿರುವು ಮತ್ತು ಫಲಿತಾಂಶ ನೀಡುವ ಕತೆಗಳನ್ನು ನಾಜೂಕಾಗಿ ಕಟ್ಟಿದ ಶೈಲಜಾ ಅವರು ಪಾತ್ರಗಳ ತಲ್ಲಣ, ವಿಷಾದ, ಅನುಸರಿಸುವಿಕೆ, ಮೌನ, ಆಂದೋಳನ, ಅವ್ಯಕ್ತ ನಿಜಾಯಿತಿಗಳನ್ನು ಬಿಚ್ಚಿಡುತ್ತಾ ವಾಸ್ತವ ಸತ್ಯಗಳಿಗೆ ಹತ್ತಿರವಾಗಿಸುತ್ತಾ ಸಾಗುವ ದಾರಿಯಲ್ಲಿ, ಪಾತ್ರಗಳು ಬಹುಶ: ಕತೆಗಾರ್ತಿಯ ಹಿಡಿತ ಮೀರಿ ಬೆಳೆದು ನಿಂತಿರುವ ಹೆಗ್ಗಳಿಕೆಯೂ ಇದೆ ಎನ್ನಿಸಿದೆ ಎನ್ನುತ್ತಾರೆ ಸಂತೋಷಕುಮಾರ ಮೆಹೆಂದಳೆ.

About the Author

ಶೈಲಜಾ ಹಾಸನ
(15 May 1964)

ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ  ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಎಂ.ಎ. ಬಿಎಡ್.ಪದವಿ ಪಡೆದ ಇವರು ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ...

READ MORE

Related Books