ಹರಿಹರ-ರಾಘವಾಂಕ ಮತ್ತು ಜಾನಪದ

Author : ಶಿವರಾಮಯ್ಯ

Pages 53

₹ 25.00




Year of Publication: 1997
Published by: ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
Address: ನೃಪತುಂಗ ರೋಡ್, ಬೆಂಗಳೂರು. 560002

Synopsys

ಕನ್ನಡದ ಶಿಷ್ಟ ಸಾಹಿತ್ಯಕ್ಕೆ ಸಾವಿರ ವರ್ಷಕ್ಕೂ ಹೆಚ್ಚುಕಾಲದ ಇತಿಹಾಸವಿದೆ. ಅದು ಎಷ್ಟು ಮತ್ತು ಹೇಗೆ ಜಾನಪದ ಸಂವೇದನೆಯನ್ನು ಕಲಾಪೂರ್ಣವಾಗಿ ಪ್ರಕಟಿಸಿದೆ ಎಂಬುದರ ತೌಲನಿಕ  ಅಧ್ಯಯನ ಮಾಡುವುದು ಅತ್ಯಂತ ಫಲಪ್ರದವಾದ ಕೆಲಸ. ಈ ದೃಷ್ಟಿಯಿಂದ ಆಕಾಡೆಮಿ ಶಿಷ್ಟ ಸಾಹಿತ್ಯ ಮತ್ತು ಜಾನಪದ ಸಂವೇದನೆ ಎಂಬ ವಿಶಿಷ್ಟ ಮಾಲಿಕೆಯನ್ನು ಆರಂಭಿಸಿ ಪ್ರಾಚೀನ ಸಾಹಿತ್ಯದಿಂದ ಹಿಡಿದು ಇತ್ತೀಚಿನ ಸಾಹಿತ್ಯವನ್ನು ಜಾನಪದೀಯ ದೃಷ್ಟಿಯಿಂದ ತೌಲನಿಕವಾಗಿ ಅಧ್ಯಯನಕ್ಕೆ ಒಳಪಡಿಸುವ ಪ್ರಯತ್ನವೊಂದನ್ನು ಮಾಡುತ್ತಿದೆ. ಇದರ ಭಾಗವಾಗಿ ’ಹರಿಹರ-ರಾಘವಾಂಕ ಮತ್ತು ಜಾನಪದ’ ಪುಸ್ತಕವನ್ನು ಪ್ರಕಟಿಸಲಾಗಿದೆ. ಇಲ್ಲಿ ಹರಿಹರ ಮತ್ತು ರಾಘವಾಂಕರ ಸಾಹಿತ್ಯ ರಚನೆಗಳಲ್ಲಿನ ಜಾನಪದ ಸಂವೇದನೆಯನ್ನು ಅಧ್ಯಯನ ಮಾಡಲಾಗಿದೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books